Advertisement

ಹುಟ್ಟು-ಸಾವಿನ ಮಧ್ಯೆ ಬದುಕುವ ಕಲೆ ಮುಖ್ಯ: ಸ್ವಾಮೀಜಿ

02:07 PM Feb 09, 2022 | Team Udayavani |

ಭಾಲ್ಕಿ: ಮನುಷ್ಯನಿಗೆ ಹುಟ್ಟು-ಸಾವುಗಳು ಶಾಶ್ವತವಾಗಿವೆ. ಈ ಹುಟ್ಟು-ಸಾವು ಎರಡರ ಮಧ್ಯ ಬದುಕುವ ಕಲೆ ಬಹುಮುಖ್ಯ ಎಂದು ಶ್ರೀ ಗುರುಬಸವೇಶ್ವರ ಸಂಸ್ಥಾನದ ಮಠದ ಹುಲಸೂರಿನ ಡಾ| ಶಿವಾನಂದ ಮಹಾಸ್ವಾಮಿಗಳು ಹೇಳಿದರು.

Advertisement

ಮೊರಂಬಿ ಗ್ರಾಮದಲ್ಲಿ ಮಂಗಳವಾರ ನಡೆದ ನಂದಿ ಬಸವೇಶ್ವರ ಮೂರ್ತಿ ಪ್ರತಿಷ್ಠಾಪನಾ ಉತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಮೊರಂಬಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಸವ ಇತಿಹಾಸದಲ್ಲಿ ಬರೆದಿಡುವ ಕಾರ್ಯಕ್ರಮವಾಗಿದೆ. ಸುಮಾರು 20 ವರ್ಷಗಳಿಂದ ಈ ಕಾರ್ಯಕ್ರಮ ಆಯೋಜಿಸುವ ಕುರಿತು ಇಲ್ಲಿಯ ಹಿರಿಯರು ತಿಳಿಸಿದ್ದರು. ಅದು ಇಂದು ಅನುಷ್ಠಾನಗೊಂಡಿದೆ. ಮನುಷ್ಯನಿಗೆ ಸಾವು ನಿಶ್ಚಿತ. ಆದರೆ ಹುಟ್ಟು-ಸಾವಿನ ನಡುವೆ ಬದುಕುವ ಕಲೆ ಕಲೆತುಕೊಳ್ಳಬೇಕಿದೆ. ಅದಕ್ಕಾಗಿ ಇಂತಹ ಧಾರ್ಮಿಕ ಕಾರ್ಯಕ್ರಮ ಆಗಾಗ ನಡೆಯುತ್ತಿರಬೇಕು ಎಂದರು.

ಉಪನ್ಯಾಸಕ ಡಾ| ಶಿವರುದ್ರಪ್ಪ ವಾರದ ನಂದಿ ಬಸವಣ್ಣನವರ ಬಗ್ಗೆ ವಿಶೇಷ ಉಪನ್ಯಾಸ ಮಂಡಿಸಿದರು. ಡಾ| ರಾಜಶೇಖರ ಶಿವಾಚಾರ್ಯರು ಬೆಮಳಖೇಡ ನೇತೃತ್ವ ವಹಿಸಿ ಮಾತನಾಡಿದರು. ಷನ್ಮುಖಪ್ಪ ಉಚ್ಚೇಕರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೋಮನಾಥ ರಾಜೇಶ್ವರೆ ಗೋರ್ಟಾ, ಜಯರಾಜ.ವ್ಹಿ, ಬಸವೇಶ್ವರರ ವಿಚಾರಧಾರೆಗಳ ಬಗ್ಗೆ ಮಾತನಾಡಿದರು.

ಇದಕ್ಕೂ ಮುನ್ನ ಗ್ರಾಮದ ಸುಮಂಗಲೆಯರು ಕುಂಭ, ಕಳಸ ಹೊತ್ತು ನಂದಿ-ಬಸವೇಶ್ವರರ ಮೂರ್ತಿಗಳ ಭವ್ಯ ಮೆರವಣಿಗೆ ಗ್ರಾಮದ ಶರಣ ಬಸವೇಶ್ವರ ದೇವಸ್ಥಾನದಿಂದ ನಂದಿ ಬಸವೇಶ್ವರ ದೇವಸ್ಥಾನದವರೆಗೆ ನಡೆಯಿತು. ಬೆಮಳಖೇಡ ಹಿರೇಮಠ ಸಂಸ್ಥಾನದ ಪೀಠಾ ಧಿಪತಿ ಡಾ| ರಾಜಶೇಖರ ಸ್ವಾಮಿ ನೇತೃತ್ವ ವಹಿಸಿದ್ದರು. ಮೆರವಣಿಗೆಗೆ ಯುವ ಮುಖಂಡ ಡಿ.ಕೆ. ಗಣಪತಿ ಚಾಲನೆ ನೀಡಿದರು.

Advertisement

ಈ ವೇಳೆ ನಾಗನಾಥ ಮೇತ್ರೆ, ಸಿದ್ರಾಮ ಗುಂದಗೆ, ಅಶೋಕ ಸ್ವಾಮಿ, ವಿಜಯಕುಮಾರ ವಾರದ, ಅಶೋಕ ಉಚ್ಚೇಕರ ಸೇರಿದಂತೆ ಇತರರಿದ್ದರು. ಅವಿನಾಶ ಹಿರೇಮಠ ಸ್ವಾಗತಿಸಿದರು. ಶಿಕ್ಷಕ ಬಾಬುರಾವ್‌ ಕಾಗೆ ನಿರೂಪಿಸಿದರು. ಶಿವಾನಂದ ಮೇತ್ರೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next