Advertisement

ಸರಣಿ ಸ್ಫೋಟ ಆರೋಪಿಗೆ ಮಾತ್ರೆ ನೀಡಿದವರ ಬಂಧನ

01:18 PM Apr 12, 2018 | |

ಬೆಂಗಳೂರು: ನಗರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದ ಸರಣಿ ಬಾಂಬ್‌ ಸ್ಫೋಟದ ಆರೋಪಿಯೊಬ್ಬನಿಗೆ ವಿಷಯುಕ್ತ ಮಾತ್ರೆಗಳನ್ನು ನೀಡಿದ ಆರೋಪದ ಮೇಲೆ ಇಬ್ಬರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪೊಲೀಸರ ಕಣ್ತಪ್ಪಿಸಿ ಈ ಇಬ್ಬರು ಆರೋಪಿಗಳು ಸರಣಿ ಸ್ಫೋಟ ಪ್ರಕರಣದ ಆರೋಪಿ ಅಬ್ದುಲ್‌ ಖಾದರ್‌ ಎಂಬಾತನಿಗೆ ಮಾತ್ರೆಗಳನ್ನು ನೀಡಿದ್ದರು. ಪ್ರಕರಣ ಸೂಕ್ಷ್ಮವಾಗಿರುವುದರಿಂದ ಆರೋಪಿಗಳ ಹೆಸರು ಬಹಿರಂಗ ಪಡಿಸಲು ಸಾಧ್ಯವಿಲ್ಲ. ವಿಚಾರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾರಿರುವ 19 ಮಂದಿ ಆರೋಪಿಗಳನ್ನು ಸೋಮವಾರ ಪರಪ್ಪನ ಅಗ್ರಹಾರ ಕಾರಾಗೃಹದಿಂದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆ ತರಲಾಗಿತ್ತು. ಈ ವೇಳೆ ಕೋರ್ಟ್‌ ಆವರಣದಲ್ಲೇ ಇದ್ದ ಅಪರಿಚಿತರಿಬ್ಬರು ಪೊಲೀಸರ ಕಣ್ತಪ್ಪಿಸಿ ಆರೋಪಿಗಳ ಪೈಕಿ ಅಬ್ದುಲ್‌ ಖಾದರ್‌ಗೆ ಮಾತ್ರೆಗಳಿದ್ದ ಪೊಟ್ಟಣ ನೀಡಿದ್ದರು. ಇದನ್ನು ಗಮನಿಸಿದ ಸಶಸ್ತ್ರ ಮೀಸಲು ಪಡೆಯ ಪಿಎಸ್‌ಐಯೊಬ್ಬರು ಆ ಅಪರಿಚಿತರಿಬ್ಬರನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next