Advertisement

ಕೇಬಲ್‌ ವಿಜಿ ಕೊಲೆ ಪ್ರಕರಣ ಕಾರ್ಪೊರೇಟರ್‌ ಪುತ್ರ ಬಂಧನ

12:25 PM Dec 19, 2018 | Team Udayavani |

ಬೆಂಗಳೂರು: ಇತ್ತೀಚೆಗೆ ಹತ್ಯೆಯಾದ ರೌಡಿಶೀಟರ್‌ ವಿಜಯ್‌ ಕುಮಾರ್‌ ಅಲಿಯಾಸ್‌ ಕೇಬಲ್‌ ವಿಜಿ ಕೊಲೆ ಪ್ರಕರಣ ಸಂಬಂಧ ಹೊಂಬೇಗೌಡನಗರದ ಬಿಬಿಎಂಪಿ ಕಾರ್ಪೋರೇಟರ್‌ ಡಿ.ಚಂದ್ರಪ್ಪ ಪುತ್ರ ಸೂರಜ್‌ ಸೇರಿದಂತೆ 13 ಮಂದಿಯನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ.

Advertisement

ಪ್ರಕರಣ ಸಂಬಂಧ ತನಿಖೆ ನಡೆಸಿದ ಆಡುಗೋಡಿ ಪೊಲೀಸರು ಈ ಹಿಂದೆ ಕೆಲ ಆರೋಪಿಗಳನ್ನು ಬಂಧಿಸಿದ್ದರು. ಇವರ ವಿಚಾರಣೆ ಸಂದರ್ಭದಲ್ಲಿ ಕಾರ್ಪೊರೇಟರ್‌ ಪುತ್ರ ಸೂರಜ್‌ ಪಾತ್ರದ ಬಗ್ಗೆ ಬಾಯಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರಜ್‌ ಹಣಕಾಸು ವ್ಯವಹಾರ ನಡೆಸುತ್ತಿದ್ದು, ವಾಹನ  ಡಿಕ್ಕಿಯಾದ ವಿಚಾರ ಮತ್ತು ಹಣಕಾಸು ವ್ಯವಹಾರವೊಂದರಲ್ಲಿ  ಸೂರಜ್‌ ಮತ್ತು ವಿಜಿ ನಡುವೆ ವಾಗ್ವಾದ ನಡೆದಿತ್ತು. ಇದರಿಂದ ಆಕ್ರೋಶಗೊಂಡ ಸೂರಜ್‌ ವಿಜಿ  ವಿರುದ್ಧ ದ್ವೇಷ ಸಾಧಿಸುತ್ತಿದ್ದ. ರಿಯಲ್‌ ಎಸ್ಟೇಟ್‌,ಕೇಬಲ್‌ ವ್ಯವಹಾರ ನಡೆಸುತ್ತಿದ್ದ ವಿಜಿ, ಈ ಹಿಂದೆ ಕೆಲವರಿಗೆ ಕಿರುಕುಳ ನೀಡಿದ್ದ.

ಅಲ್ಲದೆ, ಡೇರಿ ಮಹೇಶ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಈ ಹಿನ್ನೆಲೆಯಲ್ಲಿ ವಿಜಿಗೆ ಹಲವು ಮಂದಿ ವೈರಿಗಳಿದ್ದರು. ಇವರನ್ನೇ ಅಸ್ತ್ರಗಳನ್ನಾಗಿ ಮಾಡಿಕೊಂಡು ಸೂರಜ್‌, ವಿಜಿ ವಿರೋಧಿಗಳನ್ನು ಒಟ್ಟುಗೂಡಿಸಿದ್ದ. ಅವರಿಗೆ ಹಣಕಾಸು, ವಾಹನದ ನೆರವು ನೀಡಿ ಕೊಲೆ ಮಾಡಲು ಸಹಕಾರ ನೀಡಿದ್ದ ಎಂದು ಆಡುಗೋಡಿ ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next