Advertisement

ಆಟೋ ಚಾಲಕನ ಕೊಂದವರ ಬಂಧನ

06:31 AM Feb 03, 2019 | Team Udayavani |

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಆಟೋ ಚಾಲಕನನ್ನು ಕೊಂದಿದ್ದ ಮೂವರು ಆರೋಪಿಗಳನ್ನು ಜ್ಞಾನಭಾರತಿ ಠಾಣೆ ಪೊಲೀಸ‌ರು ಬಂಧಿಸಿದ್ದಾರೆ. ರೌಡಿಶೀಟರ್‌ ಶ್ರೀಧರ ಅಲಿಯಾಸ್‌ ಗೊರಿಲ್ಲಾ, ಮಂಜೇಶ, ವೆಂಕಟೇಶ ಅಲಿಯಾಸ್‌ ವೆಂಕ ಬಂಧಿತರು.

Advertisement

ಜ.24ರಂದು ರಾತ್ರಿ ಎನ್‌ಜಿಎಫ್ ಲೇಔಟ್‌ನ ಸನ್‌ಶೈನ್‌ ಬಾರ್‌ನ ಬಿಲ್‌ ಕೌಂಟರ್‌ ಬಳಿ ಆಟೋ ಚಾಲಕ ಎಚ್‌.ಎಸ್‌.ರಘು, ತಮ್ಮತ್ತ ನೋಡಿದ ಎಂಬ ಕಾರಣಕ್ಕೆ ಆರೋಪಿಗಳು ಜಗಳ ತೆಗೆದು, ಇರಿದು ಪರಾರಿಯಾಗಿದ್ದರು. ತೀವ್ರ ರಕ್ತ ಸ್ರಾವದಿಂದ ನಿತ್ರಾಣಗೊಂಡಿದ್ದ ರಘುನನ್ನು ಆತನ ಸ್ನೇಹಿತರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫ‌ಲಿಸದೆ ಮೃತಪಟ್ಟಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡೊದ್ದ ಪೊಲೀಸರು, ಬಾರ್‌ನ ಸಿಸಿ ಕ್ಯಾಮೆರಾ ಫ‌ುಟೇಜ್‌ ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿ ಗೊರಿಲ್ಲಾ ವಿರುದ್ಧ ವಿಜಯನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ ಠಾಣೆಗಳಲ್ಲಿ ಕೊಲೆ, ಡಕಾಯಿತಿ ಇನ್ನಿತರೆ ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್‌ ಪಟ್ಟಿ ತೆಗೆಯಲಾಗಿದೆ. ಮಂಜೇಶ ಕೂಡ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ. ಮಂಜೇಶನ ಸಂಬಂಧಿ ವೆಂಕಟೇಶ ಇತ್ತೀಚೆಗಷ್ಟೇ ನಗರಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next