Advertisement

ಪರೀಕ್ಷಾ ಸವಾಲಿಗೆ ಉತ್ತರ “ಎಕ್ಸಾಮ್‌ ವಾರಿಯರ್‌’

10:44 PM Jan 20, 2020 | Lakshmi GovindaRaj |

ಬೆಂಗಳೂರು: ಪ್ರಧಾನಿ ಮೋದಿ ಅವರು ರಚಿಸಿರುವ “ಎಕ್ಸಾಮ್‌ ವಾರಿಯರ್‌’ ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿ, ರಾಜ್ಯ ಸರ್ಕಾರ ದಿಂದಲೇ ಪ್ರತಿಶಾಲೆಗೆ ಹಂಚಲು ಚಿಂತನೆ ನಡೆಸಲಾಗಿದೆ ಎಂದು ಸಚಿವ ಎಸ್‌.ಸುರೇಶ್‌ ಕುಮಾರ್‌ ತಿಳಿಸಿದರು.

Advertisement

ಸೋಮವಾರ ರಾಜಾಜಿನಗರದ ಕೆಎಲ್‌ಇ ಕಾಲೇಜಿನಲ್ಲಿ “ಪರೀಕ್ಷಾ ಪೆ ಚರ್ಚಾ’ ನೇರಪ್ರಸಾರ ಕಾರ್ಯಕ್ರಮ ವೀಕ್ಷಿಸಿ ಮಾತನಾಡಿದ ಅವರು, ತಜ್ಞರು ಮತ್ತು ಮಕ್ಕಳ ಸಲಹೆ ಪಡೆದು ಮೋದಿಯವರು “ಎಕ್ಸಾಮ್‌ ವಾರಿಯರ್‌’ ಪುಸ್ತಕ ರಚಿಸಿದ್ದಾರೆ. ಪರೀಕ್ಷೆಗೆ ಹೇಗೆ ಸಿದ್ಧರಾಗಬೇಕು ಮತ್ತು ಪರೀಕ್ಷೆ ಭಯ ಹೋಗಲಾಡಿಸುವ ಅಂಶಗಳನ್ನು ಉಲ್ಲೇಖೀಸಿದ್ದಾರೆ.

ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದ್ದು, ಕನ್ನಡಕ್ಕೆ ಭಾಷಾಂತರಗೊಳಿಸ ಲಾಗುವುದು ಎಂದರು. ರಾಜ್ಯದಲ್ಲಿರುವ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆಗಳಿಗೆ ಒಂದರಂತೆ ಇಲ್ಲವೆ ಪ್ರತಿ ವಿದ್ಯಾರ್ಥಿಗೆ ಒಂದರಂತೆ ಪುಸ್ತಕ ವಿತರಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಆದರೆ, ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದರು.

ಇದೇ ವೇಳೆ, ಸಚಿವ ಎಸ್‌.ಸುರೇಶ್‌ಕುಮಾರ್‌, ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳ ಮಧ್ಯೆ ಕುಳಿತು “ಪರೀಕ್ಷಾ ಪೆ ಚರ್ಚಾ’ ನೇರ ಪ್ರಸಾರ ಕಾರ್ಯಕ್ರಮ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಕೆ.ಜಿ. ಜಗದೀಶ್‌, ಎಸ್‌ಎಸ್‌ಎಲ್‌ಸಿ ಬೋರ್ಡ್‌ ನಿರ್ದೇಶಕಿ ವಿ.ಸುಮಂಗಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next