Advertisement

ದೇವಲಾಪುರದಲ್ಲಿ ಬೋನಿಗೆ ಬಿದ್ದ 3ನೇ ನರಭಕ್ಷಕ ಚಿರತೆ

12:30 AM Dec 31, 2018 | Team Udayavani |

ಕಂಪ್ಲಿ: ತಾಲೂಕಿನ ದೇವಲಾಪುರ ಗ್ರಾಮದ ಕರೆಗುಡ್ಡದ ಹೊಲದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಇಟ್ಟಿದ್ದ ಬೋನಿಗೆ ಮತ್ತೂಂದು ನರಭಕ್ಷಕ ಚಿರತೆ ಭಾನುವಾರ ಬೆಳಗಿನ ಜಾವ ಸೆರೆ ಸಿಕ್ಕಿದೆ. ಆದರೆ ತಾಲೂಕಿನ ಮೆಟ್ರಿ ಗ್ರಾಮದ ಶಿವಪುರ ಶಾಲೆ ಹಿಂಭಾಗದ ಗುಡ್ಡದಲ್ಲಿ ಕುರಿಗಳಿಗೆ ತಪ್ಪಲು ತರಲು ಹೋಗಿದ್ದ ಕುರಿಗಾಯಿಗೆ ಮತ್ತೂಂದು ಚಿರತೆ ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

Advertisement

ಸೋಮಲಾಪುರ, ದೇವಲಾಪುರ ಗ್ರಾಮದಲ್ಲಿ ಇಬ್ಬರು ಮಕ್ಕಳನ್ನು ಬಲಿ ತೆಗೆದುಕೊಂಡ ನರಭಕ್ಷಕ ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಮುಂದುವರಿದಿದೆ. ದೇವಲಾಪುರದ ಕರೆಗುಡ್ಡದ ಪಂಪಾಪತಿಯ ಹೊಲದಲ್ಲಿ ಇಟ್ಟಿದ್ದ ಬೋನಿಗೆ ಭಾನುವಾರ ಬೆಳಗಿನ ಜಾವ 5 ವರ್ಷದ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ. ಡಿ.11ರಂದು ಸೋಮಲಾಪುರದಲ್ಲಿ ಬಾಲಕ ಹಾಗೂ ಡಿ.25ರಂದು ದೇವಲಾಪುರ ಗ್ರಾಮದ ಕರೆಗುಡ್ಡದ ಹತ್ತಿ ಹೊಲದಲ್ಲಿ ಬಾಲಕಿ ಬಲಿ ಪಡೆದಿತ್ತು. ಅರಣ್ಯಾಧಿಕಾರಿಗಳ ನಿರಂತರ ಕಾರ್ಯಾಚರಣೆಗೆ ಒಂದು ಹೆಣ್ಣು, ಒಂದು ಗಂಡು ಚಿರತೆಯನ್ನು ಸೆರೆ ಹಿಡಿಯಲಾಗಿತ್ತು. ಆದರೆ, ಇನ್ನೂ ಈ ಭಾಗದಲ್ಲಿ ಚಿರತೆಗಳಿವೆ ಎಂಬ ಹಿನ್ನೆಲೆ ಅರಣ್ಯ ಅ ಧಿಕಾರಿಗಳು ಆಯಾ ಸ್ಥಳಗಳಲ್ಲಿ ಬೋನುಗಳನ್ನಿರಿಸಿ ಶೋಧ ಕಾರ್ಯ ತೀವ್ರಗೊಂಡಿದ್ದರಿಂದ ಬೆಳಗಿನ ಜಾವ ಹೆಣ್ಣು ಚಿರತೆ ಬೋನಿಗೆ ಬಿದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next