Advertisement

ಶಶಿ ತರೂರ್‌ಗೆ ಮುಂದೆ ಕಾದಿದೆ ಅಪಮಾನ: ಅಮಿತ್‌ ಮಾಳವಿಯ

08:31 PM Oct 19, 2022 | Team Udayavani |

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ತೀವ್ರ ಗಂಭೀರ ಅಕ್ರಮ ನಡೆದಿದೆ ಎಂದು ಶಶಿ ತರೂರ್‌ ಆರೋಪಿಸಿದ್ದಾರೆ.

Advertisement

ಆದರೆ ಕಾಂಗ್ರೆಸ್‌ನಿಂದ ಅವರು ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಬಯಸಿದ್ದರೇ ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯ ವ್ಯಂಗ್ಯವಾಡಿದ್ದಾರೆ.

“ಶಶಿ ತರೂರ್‌ ಸೋತವರಂತೆ ಕೊರಗುತ್ತಿದ್ದಾರೆ. ಸದ್ಯ ಚುನಾವಣೆ ಸಮಯದಲ್ಲಿ ತಾನು ಬಾತ್‌ರೂಮ್‌ನಲ್ಲಿ ಲಾಕ್‌ ಆಗಿರಲಿಲ್ಲ ಎಂಬುದಕ್ಕೆ ಅವರು ಕೃತಜ್ಞರಾಗಬೇಕಿದೆ. ಇನ್ನೂ ಮುಂಬರುವ ದಿನಗಳಲ್ಲಿ ಕೆಟ್ಟ ಬೆಳವಣಿಗೆಗಳು ಎದುರಾಗಲಿವೆ.

ಗಾಂಧಿ ಕುಟುಂಬದವರ ಹೆಸರುಗಳನ್ನು ಪ್ರಸ್ತಾಪಿದಕ್ಕಾಗಿ ಅವರು ಬರುವ ತಿಂಗಳುಗಳಲ್ಲಿ ಅಪಹಾಸ್ಯ ಮತ್ತು ಅವಮಾನಕ್ಕೆ ಒಳಗಾಗಲಿದ್ದಾರೆ,’ ಎಂದು ಅಮಿತ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next