Advertisement

ಥಾಣೆ ಸ್ತ್ರೀ ಶಕ್ತಿ ಮಹಿಳಾ ಮಂಡಳಿ: ಉಚಿತ ಪುಸ್ತಕ ವಿತರಣೆ

04:27 PM Jun 26, 2018 | Team Udayavani |

ಥಾಣೆ: ಸ್ತ್ರೀ ಶಕ್ತಿ ಮಹಿಳಾ ಮಂಡಳಿ ಥಾಣೆ ವತಿಯಿಂದ ಪರಿಸರದ ತುಳು-ಕನ್ನಡಿಗರ ಹಾಗೂ ಇತರ ಭಾಷಿಗರ  ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮವು ಜೂ. 16 ರಂದು ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.

Advertisement

ಸಂಸ್ಥೆಯ ಅಧ್ಯಕ್ಷೆ ಉಷಾ ಪಿ. ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ ನಿಶಾ ಕಪೂರ್‌ ಮತ್ತು ಅಮಣಿ ಅಮೀನ್‌ ಅವರು ದೀಪಪ್ರಜ್ವಲಿಸುವುದರ ಮೂಲಕ ಚಾಲನೆ ನೀಡಿದರು. ವೇದಾ ವಿ. ಶೆಟ್ಟಿ ಅವರು ಪ್ರಾರ್ಥನೆಗೈದರು.

ಸಭೆಯನ್ನು ಉದ್ಧೇಶಿಸಿ ಮಾತನಾಡಿದ  ಅಧ್ಯಕ್ಷೆ ಉಷಾ ಪಿ. ಹೆಗ್ಡೆ ಅವರು, ಇಂದು ನೀಡುವ ಪಡೆಯುತ್ತಿರುವ ಪುಸ್ತಕದಿಂದ ಕಲಿತು ದೊಡ್ಡವರಾಗಿ ಒಳ್ಳೆಯ ಆದರ್ಶ ಪ್ರಜೆಗಳಾಗಿ ಬಾಳಿ ಮುಂದಿನ ದಿನಗಳಲ್ಲಿ ಸಹಾಯ ಪಡೆದ ಮಕ್ಕಳೂ ಕೂಡಾ ಇಂತಹ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ನುಡಿದು ಶುಭಹಾರೈಸಿದರು.

ಸಂಘದ ಕಾರ್ಯವೈಖರಿಯನ್ನು ಕಂಡು ಅತಿಥಿಗಣ್ಯರು ಶ್ಲಾಘಿಸಿದರು. ಮಹಿಳೆಯರಿಂದಲೇ ನಡೆಸಲ್ಪಡುವ ಈ ಸಂಸ್ಥೆಯು ಇನ್ನೂ ಒಳ್ಳೆಯ ಕಾರ್ಯಗಳನ್ನು ನಿರಂತರವಾಗಿ ಮಾಡುವಂತಾಗಲಿ ಎಂದು ಹಾರೈಸಿದರು. 

ಸಂಸ್ಥೆಯ ಸದಸ್ಯೆಯರುಗಳಾದ ಲಲಿತಾ ಗೌಡ, ಪೂರ್ಣಿಮಾ ಅಮೀನ್‌, ಸುಕನ್ಯಾ ಶೆಟ್ಟಿ, ಪ್ರೇಮಾ ಶೆಟ್ಟಿ, ವೇದಾ ಶೆಟ್ಟಿ, ಸುಗಂಧಿ ಸಾಲ್ಯಾನ್‌, ಉಷಾ ಶೆಟ್ಟಿ ಹಾಗೂ ಪಾಲಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಲಘು ಉಪಾಹಾರದೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next