Advertisement

ಥಾಣೆ ಬಿಲ್ಡರ್‌ಗೆ ರವಿ ಪೂಜಾರಿಯಿಂದ 2 ಕೋಟಿ ಸುಲಿಗೆ ಬೇಡಿಕೆ ಕರೆ

03:40 PM Apr 25, 2018 | udayavani editorial |

ಥಾಣೆ : ಭೂಗತ ಗ್ಯಾಂಗ್‌ಸ್ಟರ್‌ ರವಿ ಪೂಜಾರಿಯಿಂದ ತನಗೆ 2 ಕೋಟಿ ರೂ. ಸುಲಿಗೆ ಬೇಡಿಕೆಯ ಕರೆ ಬಂದಿದ್ದು ತನಗೆ ಪ್ರಾಣ ಬೆದರಿಕೆ ಒಡ್ಡಿರುವುವುದಾಗಿ ಥಾಣೆ ಜಿಲ್ಲೆಯ ಮುಂಬ್ರಾ ಟೌನ್‌ಶಿಪ್‌ನ ಬಿಲ್ಡರ್‌ ಒಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಈ ವರ್ಷ ಜನವರಿಯಿಂದಲೇ ತನಗೆ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿಯೋರ್ವನಿಂದ ಬೆದರಿಕೆ ಕರೆಗಳು ಬರುತ್ತಿದ್ದು 2 ಕೋಟಿ ರೂ. ಸುಲಿಗೆ ಹಣದ ಬೇಡಿಕೆಯನ್ನು ಒತ್ತಾಯಿಸುತ್ತಿದ್ದಾನೆ ಎಂದು ಮುಂಬ್ರಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಬಿಲ್ಡರ್‌ ಹೇಳಿದ್ದಾರೆ.

ತನಗೆ ಕರೆ ಮಾಡಿರುವ ವ್ಯಕ್ತಿಯು “ಎದುರಾಳಿ ಬಿಲ್ಡರ್‌ ಒಬ್ಬರು ನಿಮ್ಮನ್ನು ವಿವಾದಿತ ಲ್ಯಾಂಡ್‌ ಪ್ರಾಜೆಕ್ಟ್ನಿಂದ ದೂರ ಇರಿಸಲು ಮತ್ತು ನಿಮ್ಮನ್ನು ಮುಗಿಸಿ ಬಿಡಲು ರವಿ ಪೂಜಾರಿಗೆ 3 ಕೋಟಿ ರೂ. ಕೊಡಲು ಸಿದ್ದರಾಗಿದ್ದಾರೆ’ ಎಂದು ಕೂಡ ಎಚ್ಚರಿಸಿದ್ದಾನೆ ಎಂದು ದೂರಿನಲ್ಲಿ ಹಾಲಿ ಬಿಲ್ಡರ್‌ ಹೇಳಿದ್ದಾರೆ. 

ಥಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next