Advertisement

ಅನಗತ್ಯ ಸಿಸೇರಿಯನ್‌ : ಕಠಿನ ಕ್ರಮ ಎದುರಿಸಲಿವೆ ತೆಲಂಗಾಣ ಆಸ್ಪತ್ರೆಗಳು

07:23 PM Feb 28, 2017 | Team Udayavani |

ಹೈದರಾಬಾದ್‌ : ಅನಗತ್ಯ ಸಿಸೇರಿಯನ್‌ ಆಪರೇಶನ್‌ ಕೈಗೊಳ್ಳುವ ಖಾಸಗಿ ಆಸ್ಪತ್ರೆಗಳ ವಿರುದ್ಧ ತೆಲಂಗಾಣ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಲಿದೆ ಎಂದು ರಾಜ್ಯದ ಆರೋಗ್ಯ ಸಚಿವ ಸಿ ಲಕ್ಷ್ಮ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

Advertisement

ಕೆಲವೊಂದು ಖಾಸಗಿ ಆಸ್ಪತ್ರೆಗಳು ಯಾವುದೇ ನ್ಯಾಯೋಚಿತ ಸಮರ್ಥನೆ ಇಲ್ಲದೆ ಸಿಸೇರಿಯನ್‌ ಆಪರೇಶನ್‌ ಕೈಗೊಳ್ಳುತ್ತಿರುವ ಬಗ್ಗೆ ಹಲವಾರು ದೂರುಗಳು ಬಂದಿವೆ. ಈ ರೀತಿ ನ್ಯಾಯಸಮ್ಮತವಲ್ಲದ ರೀತಿಯಲ್ಲಿ ನಡೆದುಕೊಳ್ಳುವ ಆಸ್ಪತ್ರೆಗಳನ್ನು ಮುಚ್ಚಲು ಕೂಡ ಸರಕಾರ ಹಿಂಜರಿಯದು ಎಂದವರು ಹೇಳಿದರು.

ಮೆಹಬೂಬ್‌ನಗರದ ಒಂದು ಖಾಸಗಿ ಆಸ್ಪತ್ರೆಯನ್ನು ಈಚೆಗೆ ಈ ಕಾರಣಕ್ಕಾಗಿ ಮುಚ್ಚಲಾಗಿರುವುದು ತಾಜಾ ಉದಾಹರಣೆಯಾಗಿದೆ ಎಂದು ಸಚಿವ ರೆಡ್ಡಿ ಅವರು ಆರೋಗ್ಯ ಸಿಬಂದಿಗಳಿಗಾಗಿ ಸಿದ್ಧಪಡಿಸಲಾದ ಆ್ಯಪ್‌ ಒಂದನ್ನು ಬಿಡುಗಡೆ ಮಾಡಿದ ಕಾರ್ಯಕ್ರಮದಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next