Advertisement

ಪಠ್ಯ ಹಿಂಪಡೆದ ಕ್ರಮ ಸರಿಯಲ್ಲ: ಸಾರಾ ಅಬೂಬಕರ್‌

08:20 AM Aug 20, 2017 | Team Udayavani |

ಮಹಾನಗರ: “ಬರಗೂರು ರಾಮಚಂದ್ರಪ್ಪ ಅವರ ಸೈನಿಕರ ಕುರಿತಾದ ಬರಹವನ್ನು ನಾನು ಓದಿದ್ದೇನೆ. ಅದು ಚೆನ್ನಾಗಿದೆ. ಅದನ್ನು ಹಿಂಪಡೆಯುವುದು ಸರಿಯಲ್ಲ’ ಎಂದು ಹಿರಿಯ ಲೇಖಕಿ ಸಾರಾ ಅಬೂಬಕರ್‌ ಅಭಿಪ್ರಾಯ ಪಟ್ಟಿದ್ದಾರೆ. 

Advertisement

ಸುಧೀರ್‌ ಅತ್ತಾವರ್‌ ಅವರು ಪರ್ಶಿಯನ್‌ ಕಥೆಯಿಂದ ಸ್ಪೂರ್ತಿ ಪಡೆದು ಬರೆದಿರುವ  “ಬಕಾಲಿಯ ಹೂ’  ಸಂಗೀತಮಯ ನಾಟಕ ಕೃತಿಯನ್ನು ಅವರು ನಗರದ ವುಡ್‌ಲ್ಯಾಂಡ್ಸ್‌ ಹೊಟೇಲ್‌ ಸಭಾಂಗಣದಲ್ಲಿ  ಶನಿವಾರ ಬಿಡುಗಡೆಗೊಳಿಸಿದರು. 
ಸೈನಿಕರು ತಪ್ಪು ಮಾಡುವುದಿಲ್ಲ ಎಂದು ಹೇಳಲಾಗದು. ಅದು ಪ್ರಕೃತಿ ಸಹಜವಾದ ತಪ್ಪುಗಳಾಗಿರ ಬಹುದು. ಅದನ್ನೇ ಬರಗೂರು ಅವರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಆದರೆ ಅಂತಹ ಲೇಖನವನ್ನು ಬರೆಯಲೇ ಬಾರದು ಹಾಗೂ ವಿಶ್ವವಿದ್ಯಾನಿಲಯದಲ್ಲಿ ಪಠ್ಯವಾಗಿರುವ ಕೃತಿಯೊಂದನ್ನು ಹಿಂಪಡೆಯ ಬೇಕು ಎನ್ನುವುದು ಅಭಿವ್ಯಕ್ತಿ ಸ್ವಾತಂತ್ರÂದ ಹರಣ ಎಂದು ಸಾರಾ ಅಬೂಬಕರ್‌ ಹೇಳಿದರು. 

ಪ್ರೋತ್ಸಾಹ ಸಿಗುತ್ತಿಲ್ಲ
“ಮಂಗಳೂರಿನ ಇವತ್ತಿನ ಪರಿಸ್ಥಿತಿ ತನಗೆ ತೀವ್ರ ನೋವು ತರುತ್ತಿದೆ. ನಾನು 60 ವರ್ಷಗಳಿಂದ ಮಂಗಳೂರಿನಲ್ಲಿದ್ದೇನೆ. ಹಿಂದೆಲ್ಲಾ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿದ್ದ ಇಲ್ಲಿ, ಯುವಜನತೆಯ ಈಗಿನ ಸ್ಥಿತಿ ನೋಡಿದಾಗ ಆತಂಕವಾಗುತ್ತಿದೆ. ವಾಟ್ಸಾಪ್‌ನಂತಹ ಸಾಮಾಜಿಕ ಜಾಲತಾಣಗಳ ಮುಖೇನ ವಿಷಮಯ ವಿಷಯಗಳನ್ನು ಬಿತ್ತುವ ಮೂಲಕ ಸಂಘರ್ಷಗಳಿಗೆ ಯುವಜನತೆ ಎಡೆ ಮಾಡಿಕೊಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next