Advertisement
ಯಾವುದೇ ವಿಷಯದ ಬಗ್ಗೆ ನಮಗೆ ಅರಿವಿರದಿದ್ದಾಗ ಭಯ ಸಾಮಾನ್ಯ. ರಸ್ತೆಯೇ ಇಲ್ಲದ ಊರಿಗೆ ಹೊರಟಾಗ ಅಳುಕು ಕಾಡುತ್ತದೆ, ಹೋಗಿ ಬಂದು, ಹೋಗಿ ಬಂದು ಅಭ್ಯಾಸವಾಗಿಬಿಟ್ಟರೆ ಆನೆ ನಡೆದದ್ದೇ ದಾರಿ ಎಂಬಂತೆ ಸಣ್ಣ ಕಾಲುದಾರಿಯೇ ಮುಂದೊಂದು ದಿನ ಹೆ¨ªಾರಿಯಾಗುತ್ತದೆ.
ಪಡೆಯುವುದು. ಮೊಬೈಲ… ಬಳಕೆಗೆ ಸ್ವಯಂ ನಿಷೇಧ ವಿಧಿಸುವುದು. ಲೈಬ್ರರಿಯಲ್ಲಿ ಸೆರೆಯಾಗುವುದು. ವಿಷಯ ಜ್ಞಾನವನ್ನು ವೃದ್ದಿಸಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸ್ವಯಂ ಶಿಸ್ತು ಅಳವಡಿಸಿಕೊಳ್ಳುವುದು. ಏಕೆಂದರೆ “ಹೇಳಿಕೊಟ್ಟ ಬುದ್ದಿ; ಕಟ್ಟಿ ಕೊಟ್ಟ ಬುತ್ತಿ’ ಎಲ್ಲಿಯವರೆಗೆ ಬಂದಾವು ಅಲ್ಲವೇ?! ಈ ಎಲ್ಲಾ ಸಂಗತಿಗಳು ನಿಮಗೆ ಗೊತ್ತಿಲ್ಲದವೇನಲ್ಲ. ಆದರೆ ಅವುಗಳನ್ನು ಅನುಸರಿಸದಿರುವುದೇ ನಾವು ಮಾಡುವ ಪರಮ ಪಾಪದ ಕೆಲಸ. ಇಲ್ಲಿ ಮುಖ್ಯವಾಗಿ ಒಂದು ಮಾತನ್ನು ಚೆನ್ನಾಗಿ ನೆನಪಿಡಿ. ನಾವು ಆಯ್ದುಕೊಂಡ ಕೋರ್ಸ್ ಬಗ್ಗೆ ನಮಗೆ ಅಪಾರ ಪ್ರೀತಿ ಇರಬೇಕು. ಎಷ್ಟೆಂದರೆ ಹರೆಯದಲ್ಲಿ ಹುಡುಗಿಯೊಬ್ಬಳೆಡೆಗೆ ಇರುವಷ್ಟು (ಹುಡುಗಿಯರಿಗೂ ಈ ಮಾತು ಅನ್ವಯಿಸುತ್ತದೆ).
ನಾವು ನಮ್ಮ ಕೋರ್ಸನ್ನು ಪ್ರೀತಿಸಬೇಕು. ಅದನ್ನು ಚೆನ್ನಾಗಿ ಅರಿಯಬೇಕು. ನಮ್ಮ ಕೋರ್ಶೇ ನಮಗೆ ಸರ್ವಸ್ವ. ಜಗತ್ತಿನಲ್ಲಿ ನಮ್ಮ ಅಧ್ಯಯನದ ಸಂಗತಿ ಬಿಟ್ಟರೆ ಬೇರೇನೂ ಇಲ್ಲವೆಂದು ತೀರ್ಮಾನಿಸಬೇಕು. “ನನ್ನ ಗುರಿ ತಲುಪಲು ನಾನೇ ಹೋರಾಡುತ್ತೇನೆ’ ಎಂದು ಅಂದುಕೊಂಡ ಘಳಿಗೆಯಲ್ಲಿ ಅಡಗಿದೆ ನೋಡಿ ಯಶಸ್ಸಿನ ಸೀಕ್ರೆಟ್. ಹೇಗೆ ಅರ್ಜುನನಿಗೆ ಮರದ ಮೇಲೆ ಕುಳಿತ ಪಕ್ಷಿಯ ಕಣ್ಣಿನ ಹೊರತು ಬೇರೇನೂ ಕಾಣಿಸಲಿಲ್ಲವೋ, ಹಾಗೆಯೇ ನಮಗೆ ಪರೀಕ್ಷೆಯ ಪ್ರಶ್ನೆಗಳಿಗೆ ಉತ್ತರದ ಹೊರತು ಬೇರೇನೂ
ಕಾಣದಂತಿರಬೇಕು. ಇವತ್ತಿನ ಹೈ ಸ್ಪೀಡ್ ಕಾಂಪಿಟೇಶನ್ ಯುಗದಲ್ಲಿ, ನೀನು ಅಂದ್ರೆ ನಿಮ್ಮಪ್ಪಅನ್ನುವವರೇ ಹೆಚ್ಚಾಗಿರುವಾಗ ನಾವು ಬೆಪ್ಪರಾಗುವುದು ತಪ್ಪಲ್ಲವೇ?! ಇಷ್ಟೆಲ್ಲಾ ಸಿದ್ದತೆ ಮಾಡಿಕೊಂಡ ಮೇಲೂ ಅಫ್ಟರ್ಆಲ… ಪರೀಕ್ಷೆಗೆ ಹೆದರಬೇಕೆ? ಜೋರಾಗಿ ಒಮ್ಮೆ ಪ್ರಳಯವಾಗುವಂತೆ ಕೂಗಿ: “ಪರೀಕ್ಷೆ… ಐ ಲವ್ ಯೂ!’ ಎದೆಯೊಳಗಿನ ಅಳುಕನ್ನು ಅಳಿಸಿಹಾಕಿ “ಜೋಶ್’ನಿಂದ ಪರೀಕ್ಷೆ ಬರೆಯಿರಿ. ಆಲ…ದ ಬೆಸ್ಟ್….
Related Articles
Advertisement