Advertisement

ಕಾಶ್ಮೀರ:ಉಗ್ರರಿಂದ ಕಾನ್‌ಸ್ಟೇಬಲ್‌ ಹತ್ಯೆ,ಇಮಾಮ್‌ ಮೇಲೆ ಫೈರಿಂಗ್‌

09:53 AM Jul 06, 2018 | |

ಶ್ರೀನಗರ : ಕಣಿವೆ ರಾಜ್ಯದಲ್ಲಿ ಆಪರೇಷನ್‌ ಆಲೌಟ್‌ಗೆ ಪ್ರತಿತಂತ್ರ ಹೂಡಿರುವ ಉಗ್ರರು ವಿಧ್ವಂಸಕ ಕೃತ್ಯಗಳನ್ನು ನಡೆಸಿ ಅಟ್ಟಹಾಸ ಮೆರೆಯುತ್ತಿದ್ದಾರೆ. ಗುರುವಾರ ಪೊಲೀಸ್‌ ಪೇದೆಯೊಬ್ಬರನ್ನು ಅಪಹರಿಸಿ ಹತ್ಯೆಗೈದಿದ್ದು, ಶುಕ್ರವಾರ ಬೆಳಗಿನ ಜಾವ ಇಮಾಮ್‌ ವೊಬ್ಬರ ಮೇಲೆ ಗುಂಡಿನ ದಾಳಿ ನಡೆಸಿವೆ. 

Advertisement

ಶೋಪಿಯಾನ್‌ನಲ್ಲಿ ಗುರುವಾರ ಸಂಜೆ ಉಗ್ರರಿಂದ ಅಪಹರಣಕ್ಕೊಳಗಾದ ಕಾನ್‌ಸ್ಟೇಬಲ್‌  ಕುಲ್‌ಗಾಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಕರ್ತವ್ಯ ನಿರತರಾಗಿದ್ದ ಜಾವೀದ್‌ ಅಹಮದ್‌ ದಾರ್‌ ಅವರನ್ನು ಕಾರಿನಲ್ಲಿ ಬಂದಿದ್ದ ಶಸ್ತ್ರಧಾರಿ ಉಗ್ರರು ಗನ್‌ಪಾಯಿಂಟ್‌ನಲ್ಲಿ ಅಪಹರಣ ಗೈದಿದ್ದರು. 

ಅಪಹರಣ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಮತ್ತು ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದ್ದರು. 

ಪುಲ್ವಾಮಾದಲ್ಲಿ 45 ರ ಹರೆಯದ ಇಮಾಮ್‌ ಮೇಲೆ ಉಗ್ರರ ಗುಂಪು ಗುಂಡಿನ ದಾಳಿ ನಡೆಸಿ ಪರಾರಿಯಾಗಿದೆ. ಈ ಕುರಿತು ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

ಜೂನ್‌ 14 ರಂದು ಸೇನಾ ಯೋಧ ಔರಂಗಜೇಬ್‌ ಅವರನ್ನು ಅಪಹರಿಸಿದ್ದ ಉಗ್ರರು ಬರ್ಬರವಾಗಿ ಹತ್ಯೆಗೈದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next