Advertisement

Terrorist ಪಕ್ಷ ದೇಶವಾಳುತ್ತಿದೆ…: ಮಲ್ಲಿಕಾರ್ಜುನ ಖರ್ಗೆ ಕಿಡಿ

07:49 PM Oct 12, 2024 | Team Udayavani |

ಕಲಬುರಗಿ: ”ದೇಶವನ್ನಾಳುತ್ತಿರುವುದು ಟೆರರಿಸ್ಟ್ ಪಕ್ಷ, ದಲಿತರ ಮೇಲೆ ಹಲ್ಲೆ ಮಾಡೋಡು, ಬಾಯಲ್ಲಿ ಮೂತ್ರ ಮಾಡೋದು, ಆದಿವಾಸಿ ಹೆಣ್ಣು ಮಕ್ಕಳನ್ನು ತಂದು ಅತ್ಯಾಚಾರ ಮಾಡುವ ಟೆರರಿಸ್ಟ್ ಪಕ್ಷ” ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಶನಿವಾರ(ಅ18) ಕಿಡಿ ಕಾರಿದ್ದಾರೆ.

Advertisement

ನಗರದಲ್ಲಿ ಸಿದ್ಧಾರ್ಥ ವಿಹಾರದಲ್ಲಿ ದಸರೆ ಪ್ರಯುಕ್ತ ಧರ್ಮಚಕ್ರ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕಾಂಗ್ರೆಸ್ ಒಂದು ಅರ್ಬನ್ ನಕ್ಸಲ್‌ರು ನಡೆಸುತ್ತಿರುವ ಪಕ್ಷ ಎಂದು ಪ್ರಧಾನಿ ನರೇಂದ್ರ ಮೋದಿ ದೂಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಖರ್ಗೆ, ಅವರ ನಡವಳಿಕೆ, ಮಾತು ಏನು ಸೂಚಿಸುತ್ತಿದೆ. ದೇಶದ ಜನತೆಗೆ ಎಲ್ಲವೂ ಅರ್ಥವಾಗುತ್ತದೆ. ಮೋದಿ ಅವರು ಮೊದಲಿಂದಲೂ ಇಂತಹದೆ ಆರೋಪಗಳನ್ನು ಕಾಂಗ್ರೆಸ್ ವಿರುದ್ಧ ಮಾಡುತ್ತಲೇ ಬಂದಿದ್ದಾರೆ. ಇದರಿಂದಾಗಿ ದೇಶದಲ್ಲಿ ಕಾಂಗ್ರೆಸ್‌ನ್ನು ಅತ್ಯಂತ ಆರೋಪಿತ ಸ್ಥಾನದಲ್ಲಿ ನಿಲ್ಲಿಸುವ ಪ್ರಯತ್ನವಷ್ಟೆ ಮಾಡಲು ಅವರಿಂದ ಸಾಧ್ಯವಾಗಿದೆ ಎಂದರು.

ಜಮ್ಮು ಕಾಶ್ಮೀರ ಹಾಗೂ ಹರಿಯಾಣದ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಕುರಿತು ವಿಶ್ಲೇಷಣೆ ನಡೆದಿದೆ. ಈಗಾಗಲೇ ಪಕ್ಷದ ಹಿರಿಯರನ್ನು ಕರೆದು ಸಭೆಯೂ ಮಾಡಿದ್ದು, ಅವರ ಅಭಿಪ್ರಾಯಗಳನ್ನು ಸಂಗ್ರಹ ಮಾಡಲಾಗಿದೆ. ನಮ್ಮ ಕಾರ್ಯಕರ್ತರು, ಮುಖಂಡರು ಹಾಗೂ ಹಿರಿಯರ ಪಾತ್ರವೇನಿವೆ ಎನ್ನುವ ಕುರಿತು ಬೂತ್ ಮಟ್ಟದಿಂದಲೂ ತರಿಸಿಕೊಳ್ಳಲಾಗುತ್ತಿದೆ ಎಂದರು.

ಹರಿಯಾಣದಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಯಾವ ಮಾಧ್ಯಮವೂ ಹೇಳಿಲ್ಲ. ಆದರೆ, ವಿಶ್ಲೇಷಣೆಗಳಲ್ಲೋ, ಅಥವಾ ಇನ್ಯಾವುದೋ ರೀತಿಯಿಂದ ಗಡಿಬಿಡಿಯಾಗಿದೆ. ಅದನ್ನು ನಾವು ಪತ್ತೆ ಮಾಡುತ್ತಿದ್ದೇವೆ ಎಂದರು. ಅಲ್ಲದೆ, ಹರಿಯಾಣದ ಫಲಿತಾಂಶ ಮಹಾರಾಷ್ಟ್ರದ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲೂ ಜನ ನಮ್ಮ ಪರಿವಾಗಿದ್ದಾರೆ. ನೋಡೋಣ ಅಲ್ಲಿನ ಚುನಾವಣೆ ತಂತ್ರ ಮತ್ತು ವಿಷಯಗಳೇನಿವೇಯೋ ಅದನ್ನು ಆಧರಿಸಿ ಜನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next