Advertisement

ಭಾರತೀಯರಿಗೆ ಉಗ್ರ ಪಟ್ಟ : ಪಾಕಿಸ್ಥಾನದ ಸಂಚು ವಿಫ‌ಲ

12:43 AM Sep 04, 2020 | mahesh |

ನ್ಯೂಯಾರ್ಕ್: ಇಬ್ಬರು ಭಾರತೀಯ ಪ್ರಜೆಗಳನ್ನು ಉಗ್ರರ ಪಟ್ಟಿಗೆ ಸೇರಿಸಲು ನಡೆಸಿದ್ದ ಪಾಕ್‌ ಕುತಂತ್ರಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಹಿನ್ನಡೆಯಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ಇದನ್ನು ತಡೆಹಿಡಿದಿದೆ ಎಂದು ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್‌. ತಿರುಮೂರ್ತಿ ತಿಳಿಸಿದ್ದಾರೆ.

Advertisement

ಯುಎನ್‌ಎಸ್‌ಸಿಯ ಭಯೋತ್ಪಾದನ ನಿಗ್ರಹ ನಿರ್ಬಂಧಗಳ ಸಮಿತಿಯಡಿ ಅಂಗಾರಾ ಅಪ್ಪಾಜಿ ಮತ್ತು ಗೋವಿಂದ ಪಟ್ನಾಯಕ್‌ ಎಂಬ ಇಬ್ಬರನ್ನು ಉಗ್ರ ಪಟ್ಟಿಗೆ ಸೇರಿಸುವಂತೆ ಪಾಕ್‌ ಪಟ್ಟು ಹಿಡಿದಿತ್ತು. ಆರೋಪ ಮಾಡಿದರೆ ಸಾಲದು, ಸೂಕ್ತ ಸಾಕ್ಷ್ಯ ಗಳನ್ನು ಒದಗಿಸಬೇಕು ಎಂದು ಯುಎನ್‌ಎಸ್‌ಸಿ ಪಾಕ್‌ಗೆ ಸೂಚಿಸಿತ್ತು. ಸಾಕ್ಷ್ಯಗಳನ್ನು ಪೂರೈಸು ವಲ್ಲಿ ಪಾಕ್‌ ವಿಫ‌ಲವಾದ ಹಿನ್ನೆಲೆಯಲ್ಲಿ ಯುಎನ್‌ಎಸ್‌ಸಿ ಈ ಆರೋಪ ವಜಾಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next