Advertisement

ಶ್ರೀನಗರ, ಆವಂತಿಪುರ ವಾಯುನೆಲೆಗಳ ಮೇಲೆ ಉಗ್ರರ ಕಣ್ಣು

09:36 AM May 18, 2019 | Vishnu Das |

ಹೊಸದಿಲ್ಲಿ : ಉಗ್ರರು ಆವಂತಿಪುರ ಮತ್ತು ಶ್ರೀನಗರ ವಾಯುನೆಲೆಗಳ ಮೇಲೆ ಭಾರೀ ದಾಳಿಗೆ ಸಿದ್ಧತೆ ನಡೆಸಿದ್ದಾರೆ ಎಂದು ಗುಪ್ತಚರ ಇಲಾಖೆ ಶುಕ್ರವಾರ ಎಚ್ಚರಿಕೆ ನೀಡಿರುವುದಾಗಿ ಸರಕಾರದ ಮೂಲಗಳು ತಿಳಿಸಿವೆ.

Advertisement

ಎಚ್ಚರಿಕೆ ಹಿನ್ನಲೆಯಲ್ಲಿ ಎರಡೂ ವಾಯುನೆಲೆಗಳಸುತ್ತಮುತ್ತ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ವಾಯುನೆಲೆಗಳ ಸುತ್ತ ಹೈ ಅಲರ್ಟ್‌ ಘೋಷಿಸಲಾಗಿದೆ.

ಗುರುವಾರ ಶೋಪಿಯಾನ್‌ ಮತ್ತು ಪುಲ್ಮಾಮಾದಲ್ಲಿ 6 ಮಂದಿ ಜೈಷ್‌ ಇ ಮೊಹಮದ್‌ ಉಗ್ರರ ಎನ್‌ಕೌಂಟರ್‌ ನಡೆದ ಬೆನ್ನಲ್ಲೇ ಈ ವರದಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next