Advertisement

ಉಗ್ರವಾದವೇ ದೊಡ್ಡ ಬೆದರಿಕೆ

08:10 AM Jun 16, 2019 | Team Udayavani |

ದುಷಾನ್ಬೆ: ಭಯೋತ್ಪಾದನೆ ಎನ್ನುವುದು ಏಷ್ಯಾದ ಜನರಿಗೆ ಅತಿ ದೊಡ್ಡ ಅಪಾಯವಾಗಿದೆ. ಭಯೋತ್ಪಾದಕರನ್ನು ಮತ್ತು ಭಯೋತ್ಪಾದನೆಯ ಸಂತ್ರಸ್ತರನ್ನು ಸಮಾನವಾಗಿ ಕಾಣಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ. ತಜಕಿಸ್ತಾನದ ರಾಜಧಾನಿಯಲ್ಲಿ ಶನಿವಾರ ನಡೆದ ಇಂಟರಾಕ್ಷನ್‌ ಆ್ಯಂಡ್‌ ಕಾನ್ಫಿಡೆನ್ಸ್‌ ಬಿಲ್ಡಿಂಗ್‌ ಮೆಷರ್ಸ್‌ ಇನ್‌ ಏಷ್ಯಾ (ಸಿಐಸಿಎ) ಶೃಂಗದಲ್ಲಿ ಮಾತನಾಡಿದ ಅವರು, ಸಿಐಸಿಎ ಸದಸ್ಯರು ಕೂಡ ಭಯೋತ್ಪಾದನೆಯ ಸಂತ್ರಸ್ತರು ಎಂದು ತಿಳಿಸಿದ್ದಾರೆ. ಏಷ್ಯಾದಲ್ಲಿರುವ ನಾವೆಲ್ಲರೂ ಎದುರಿಸುತ್ತಿರುವ ಅತಿ ದೊಡ್ಡ ಬೆದರಿಕೆಯೇ ಉಗ್ರವಾದ. ಸಿಐಸಿಎಯಲ್ಲಿನ ಎಲ್ಲ ಸದಸ್ಯರೂ ಭಯೋತ್ಪಾದನೆ ಮತ್ತು ತೀವ್ರಗಾಮಿತ್ವ ನಿಗ್ರಹಕ್ಕೆ ಬದ್ಧರಾಗಿದ್ದಾರೆ. ಜತೆಗೆ, ಅವುಗಳ ನಿಗ್ರಹಕ್ಕೆ ಸಮಗ್ರ ಕಾರ್ಯತಂತ್ರ ರೂಪಿಸುವ ನಿಟ್ಟಿನಲ್ಲೂ ಕೈಜೋಡಿಸಿದ್ದಾರೆ ಎಂದೂ ಜೈಶಂಕರ್‌ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next