Advertisement

ಉಗ್ರ ಹಣ: ದಕ್ಷಿಣ ಕಾಶ್ಮೀರದ 11 ಕಡೆಗಳಲ್ಲಿ ಎನ್‌ಐಎ ಶೋಧ ಕಾರ್ಯಾಚರಣೆ

10:35 AM Feb 27, 2019 | Team Udayavani |

ಹೊಸದಿಲ್ಲಿ : ಕಳೆದ ಫೆ.14ರಂದು ನಡೆದಿದ್ದ ಪುಲ್ವಾಮಾ ಉಗ್ರ ದಾಳಿಯನ್ನು ಅನುಸರಿಸಿ ರಾಷ್ಟ್ರೀಯ ತನಿಖಾ ತಂಡ (ಎನ್‌ಐಎ) ಆರಂಭಿಸಿದ್ದ ಉಗ್ರ ಹಣ ಪೂರೈಕೆ ಮಾರ್ಗಗಳ ಶೋಧ ಕಾರ್ಯವನ್ನು ಮುಂದುವರಿಸಿದ್ದು ಇಂದು ಬುಧವಾರ ಅದು ದಕ್ಷಿಣ ಕಾಶ್ಮೀರದ ಸುಮಾರು 11 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಂಡಿತು. 

Advertisement

ಈಚಿನ ಪುಲ್ವಾಮಾ ಉಗ್ರ ದಾಳಿ ಮುಖ್ಯ ಆರೋಪಿಗಳೆಂದು ಗುರುತಿಸಲ್ಪಟ್ಟಿರುವ ಮತ್ತು ಜೈಶ್‌ ಎ ಮೊಹಮ್ಮದ್‌ ಸಕ್ರಿಯ ಉಗ್ರರಾಗಿರುವ ಮುದಸ್ಸಿರ್‌ ಅಹ್ಮದ್‌ ಖಾನ್‌ ಮತ್ತು ಸಜ್ಜದ್‌ ಭಟ್‌ ಅವರ ಮನೆಗಳ ಮೇಲೆ ಎನ್‌ಐಎ ದಾಳಿ ನಡೆಸಿತು. 

ದಕ್ಷಿಣ ಕಾಶ್ಮೀರದ ತ್ರಾಲ್‌, ಆವಂತಿಪೋರಾ ಮತ್ತು ಪುಲ್ವಾಮಾ ಪ್ರದೇಶಗಳಲ್ಲಿ  ಜೆಇಎಂ ಪರ ಕೆಲಸ ಮಾಡುತ್ತಿದ್ದ ಹಲವು ಶಂಕಿತರ ಮನೆಗಳ ಮೇಲೂ ಎನ್‌ಐಎ ಇಂದು ದಾಳಿ ನಡೆಸಿತು. ಈ ಸಂದರ್ಭದಲ್ಲಿ ಸಂಕೇತ ಬರಹಗಳನ್ನು ಒಳಗೊಂಡ ಡೈರಿಗಳನ್ನು ಮತ್ತು ಹಲವು ಅಪರಾಧಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ಎನ್‌ಐಎ ಹೇಳಿದೆ. 

ದಕ್ಷಿಣ ಕಾಶ್ಮೀರದ ಮೂವರು ಮುಖ್ಯ ಪ್ರತ್ಯೇಕತಾವಾದಿ ನಾಯಕರಾದ ಮೊಹಮ್ಮದ್‌ ಶಬಾನ್‌ ದಾರ್‌, ಶವ್‌ಕತ್‌ ಮೌಲವಿ ಮತ್ತು ಯಾಸ್ಮಿನ್‌ ರಜಾ ಅವರ ಮನೆಗಳ ಮೇಲೂ ದಾಳಿ ನಡೆಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next