Advertisement

ಉಗ್ರರ ದಾಳಿ: ರಾಜ್ಯದ ಚಿಕ್ಕೋಡಿ ಯೋಧ ಹುತಾತ್ಮ

06:00 AM Nov 28, 2018 | Team Udayavani |

ಚಿಕ್ಕೋಡಿ: ಜಮ್ಮು-ಕಾಶ್ಮೀರದ ಗಡಿಯಲ್ಲಿ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಚಿಕ್ಕೋಡಿ ತಾಲೂಕಿನ ಬೂದಿಹಾಳ ಗ್ರಾಮದ ಯೋಧ  ಪ್ರಕಾಶ ಪುಂಡಲೀಕ ಜಾಧವ(29) ಹುತಾತ್ಮರಾಗಿದ್ದಾರೆ. ಕುಲ್ಗಾಮ್‌ ಮತ್ತು ಪುಲ್ವಾಮಾ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಭಾರತೀಯ ಸೇನೆ ನಡೆಸಿದ ಎನ್‌ ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ವೇಳೆ ಪ್ರಕಾಶ  ಪುಂಡಲೀಕ ಜಾಧವ್‌ ವೀರಮರಣ ಹೊಂದಿದ್ದಾರೆ. ಈ ಸಂಬಂಧ ಮಂಗಳವಾರ ಮಧ್ಯಾಹ್ನ ಪ್ರಕಾಶ್‌ ಅವರ ಕುಟುಂಬಕ್ಕೆ ಸೇನೆಯ ಮೂಲಗಳು ಮಾಹಿತಿ ನೀಡಿವೆ. ಜಾಧವ್‌ ಅವರು 11 ವರ್ಷದಿಂದ ಸೇನೆಯಲ್ಲಿದ್ದಾರೆ.

Advertisement

2007ರಲ್ಲಿ ಬೆಳಗಾವಿ ಮರಾಠಾ ಲೈಟ್‌ ಇನ್‌ಫ‌ಂಟ್ರಿಯಲ್ಲಿ ಸೇರ್ಪಡೆಯಾಗಿ, ಇದೀಗ ಮೇಜರ್‌ ಆಗಿದ್ದರು. ದೀಪಾವಳಿಗೆ ಬಂದಿದ್ದರು: ಯೋಧ ಪ್ರಕಾಶ ಜಾಧವ ಅವರು ಪತ್ನಿ ನೀತಾ, ಮಂಗಳು ಶ್ರಾವಣಿ, ತಾಯಿ ಶಾರದಾ, ತಂದೆ ಪುಂಡಲಿಕ ಅವರನ್ನು ಅಗಲಿದ್ದಾರೆ. ಎರಡು ವರ್ಷದ ಹಿಂದೆ ಮದುವೆ ಮಾಡಿಕೊಂಡಿದ್ದ ಯೋಧ ಪ್ರಕಾಶ್‌ ಇತ್ತೀಚೆಗೆ ದೀಪಾವಳಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಆಗಮಿಸಿ ಹದಿನೈದು ದಿನಗಳ ಹಿಂದೆಯಷ್ಟೇ ಸೇವೆಗೆ ಹಾಜರಾ ಗಿದ್ದರು. ಕುಟುಂಬ ಸದಸ್ಯರೊಂದಿಗೆ ರವಿವಾರ ರಾತ್ರಿ ದೂರವಾಣಿ ಕರೆ ಮಾಡಿ ಎಲ್ಲರ ಯೋಗ ಕ್ಷೇಮ ವಿಚಾರಿಸಿ ದ್ದರು ಎಂದು ಯೋಧನ ಕುಟುಂಬಸ್ಥರು ತಿಳಿಸಿದ್ದಾರೆ. ಹುತಾತ್ಮ ಯೋಧನ ಪಾರ್ಥಿವ ಶರೀರ ಬುಧವಾರ ಮಧ್ಯಾಹ್ನ ಸ್ವಗ್ರಾಮಕ್ಕೆ ಬರುತ್ತಿದ್ದು, ಸಕಲ  ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next