Advertisement

ಹಂದಿ ಕದಿಯಲು ಬಂದ ಕಳ್ಳರಿಂದ ಮೂವರ ಕೊಲೆ: ಚಿತ್ರದುರ್ಗದಲ್ಲೊಂದು ಭೀಕರ ಘಟನೆ

12:06 PM Aug 17, 2020 | keerthan |

ಚಿತ್ರದುರ್ಗ: ಹಂದಿ ಕದಿಯಲು ಬಂದ ಕಳ್ಳರು ಮೂರು ಜನರನ್ನು ಬರ್ಬರವಾಗಿ ಕೊಲೆ‌ಮಾಡಿರುವ ಘಟನೆ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ ನಡೆದಿದೆ.

Advertisement

ಸೋಮವಾರ ನಸುಕಿನಲ್ಲಿ ನಾಯಕನಹಟ್ಟಿ ಗ್ರಾಮದಲ್ಲಿ ಹಂದಿ ಸಾಕುತ್ತಿದ್ದ ಮಾರೇಶ್ ಮಗ ಸೀನಪ್ಪ ಹಾಗು ತಮ್ಮನ ಮಗ ಯಲ್ಲೇಶ್ ಕೊಲೆಯಾಗಿದ್ದಾರೆ.

ಹಂದಿ‌ ಕದಿಯಲು ಬಂದವರು ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.

ವಾಹನಗಳಲ್ಲಿ ಬಂದು ಕಾರದ ಪುಡಿ ಎರಚಿ ಕೊಲೆ ಮಾಡಿರುವ ಕುರುಹು ಪತ್ತೆಯಾಗಿದ್ದು, ಸ್ಥಳಕ್ಕೆ ನಾಯಕನಹಟ್ಟಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next