Advertisement

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅವಧಿ ಇಂದು ಕೊನೆ; ಇನ್ನೂ ಬಾರದ ವಿಸ್ತರಣೆ ಆದೇಶ

11:39 PM Jan 30, 2024 | Team Udayavani |

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ಅವಧಿ ಜ. 31ಕ್ಕೆ ಕೊನೆಗೊಳ್ಳಲಿದ್ದು, ವಿಸ್ತರಣೆಗೆ ಸಂಬಂಧಿಸಿದಂತೆ ಸರಕಾರದಿಂದ ಇನ್ನೂ ಆದೇಶ ಹೊರಬಿದ್ದಿಲ್ಲ.

Advertisement

ತಮಗೆ ನೀಡಿದ ಅವಧಿಯಲ್ಲಿ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನೂ ಸಿದ್ಧಪಡಿಸಲಾಗಿದೆ. ಅದನ್ನು ಸರಕಾರಕ್ಕೆ ನೀಡುವುದು ಮಾತ್ರ ಬಾಕಿ ಇದೆ. ಈ ಮಧ್ಯೆ ಆಯೋಗದ ಅವಧಿ ಮುಗಿಯುತ್ತಿದೆ. ಒಂದು ಕಡೆ ಸರಕಾರವು ವರದಿ ಸ್ವೀಕರಿಸುವ ಸಂಬಂಧ ಕರೆದು ಮಾತುಕತೆಯನ್ನೂ ನಡೆಸಿಲ್ಲ; ಮತ್ತೂಂದೆಡೆ ಅವಧಿ ವಿಸ್ತರಣೆಗೆ ಆದೇಶವನ್ನೂ ಹೊರ ಡಿಸಿಲ್ಲ. ಇದು ತುಸು ಗೊಂದಲಕ್ಕೆ ಕಾರಣವಾಗಿದ್ದು, ಬುಧವಾರ ಇದಕ್ಕೆ ತೆರೆಬೀಳುವ ಸಾಧ್ಯತೆ ಇದೆ.

ಅವಧಿ ವಿಸ್ತರಣೆ ಬಗ್ಗೆ ಇದುವರೆಗೆ ಸರಕಾರದಿಂದ ತಮಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಆದೇಶ ಹೊರಡಿಸಿದರೆ ಮುಂದುವರಿಯಲಾಗುವುದು. ವಿಸ್ತರಿಸಿದ ಅವಧಿಯಲ್ಲಿ ಮುಖ್ಯಮಂತ್ರಿಗಳ ಭೇಟಿಗೆ ಸಮಯ ಪಡೆದು, ವರದಿ ಸಲ್ಲಿಸಲಾಗುವುದು ಎಂದು
– ಕೆ. ಜಯಪ್ರಕಾಶ್‌ ಹೆಗ್ಡೆ, ಆಯೋಗದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next