Advertisement

ತೇರದಾಳ: ಶಿವಶರಣ ಹರಳಯ್ಯ ಸಮಾಜದಿಂದ ಆಹಾರ ಕಿಟ್‌

11:02 AM May 29, 2020 | Suhan S |

ತೇರದಾಳ: ಮನುಷ್ಯನಾದವನಿಗೆ ಸ್ವಾರ್ಥ ಮನೋಭಾವ ಇರಬಾರದು. ಮಾನವೀಯತೆ ಇರಬೇಕು ಎಂದು ಪುರಸಭೆ ಸದಸ್ಯ ಸಚಿನ ಕೊಡತೆ ಹೇಳಿದರು. ಪಟ್ಟಣದ ಶಿವಶರಣ ಹರಳಯ್ಯ ಸಮಾಜದ ವತಿಯಿಂದ ಸಮಾಜದ ಕಡು ಬಡವರಿಗೆ ಆಹಾರ ಕಿಟ್‌ ವಿತರಣೆ ಮಾಡಿ ಅವರು ಮಾತನಾಡಿದರು.

Advertisement

ಕೋವಿಡ್ ದಿಂದಾಗಿ ಕೂಲಿ ಮಾಡಿ ಬದುಕುವ ಬಡವರಿಗೆ ಉದ್ಯೋಗ ಇಲ್ಲದೇ ಸಂಕಷ್ಟ ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಅಂತವರಿಗೆ ನೆರವು ಮಾಡಿವುದು ಎಲ್ಲರ ಕರ್ತವ್ಯವಾಗಿದೆ. ಹರಳಯ್ಯ ಸಮಾಜ ಕೂಡ ಹಿಂದುಳಿದ ಮತ್ತು ಬಡತನ ಹೊಂದಿರುವ ಸಮಾಜವಾಗಿದೆ. ಬಡತನದ ಜತೆಗೆ ಇನ್ನೊಬ್ಬರ ಬಡತನ ಗುರುತಿಸಿ ಅಂತಹ ಕುಟುಂಬಗಳಿಗೆ ಅಗತ್ಯ ದಿನಸಿ ಕಿಟ್‌ ವಿತರಣೆ ಮಾಡುವ ಕೆಲಸವನ್ನು ಸಮಾಜದ ವತಿಯಿಂದ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಾಳಕೃಷ್ಣ ಸಣ್ಣಕ್ಕಿ, ಲಕ್ಷ್ಮಣ ಕೊಡತೆ, ರಾಜು ಸಣ್ಣಕ್ಕಿ, ಪ್ರಭಾಕರ ಸಣ್ಣಕ್ಕಿ, ಆನಂದ ಕೊಡೆ, ಶಿವಾಜಿ ಕಾಂಬಳೆ, ಕಿರಣ ಸಣ್ಣಕ್ಕಿ, ಅರವಿಂದ ಸಣ್ಣಕ್ಕಿ, ಕಿಶೋರ ಸಣ್ಣಕ್ಕಿ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next