Advertisement

ಟಕೀಲಾ ಹಿನ್ನೆಲೆ ಸಂಗೀತ ಮುಕ್ತಾಯ

03:27 PM Jul 20, 2022 | Team Udayavani |

“ಶ್ರೀ ಸಿದ್ಧಿವಿನಾಯಕ ಫಿಲಂಸ್‌’ ಬ್ಯಾನರ್‌ನಲ್ಲಿಮರಡಿಹಳ್ಳಿನಾಗಚಂದ್ರ ನಿರ್ಮಿಸುತ್ತಿರುವ”ಟಕೀಲಾ’ ಚಿತ್ರದ ಹಿನ್ನೆಲೆ ಸಂಗೀತ ಕಾರ್ಯ ರೇಣು ಡಿಜಿಸ್ಟುಡಿಯೋದಲ್ಲಿ ಇತ್ತೀಚೆಗೆಪೂರ್ಣಗೊಂಡಿತು.

Advertisement

ಈ ಹಿಂದೆ “ಜಡ್‌’, “ಹೂಂ ಅಂತೀಯಾ ಉಹೂಂ ಅಂತೀಯಾ’, “ಮೀಸೆ ಚಿಗುರಿದಾಗ…’ ಮೊದಲಾದ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ. ಪ್ರವೀಣ್‌ ನಾಯಕ್‌ “ಟಕೀಲಾ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.

ಚಿತ್ರಕ್ಕೆ ಪಿ.ಕೆ.ಹೆಚ್‌ ದಾಸ್‌ ಛಾಯಾಗ್ರಹಣ,ಗಿರೀಶ್‌ ಸಂಕಲನವಿದೆ. ಚಿತ್ರದಹಾಡುಗಳಿಗೆ ಟಾಪ್‌ ಸ್ಟಾರ್‌ ರೇಣು ಸಂಗೀತ ಸಂಯೋಜಿಸುತ್ತಿದ್ದಾರೆ. ಧರ್ಮಕೀರ್ತಿರಾಜ್‌, ನಿಖೀತಾ ಸ್ವಾಮಿ, ನಾಗೇಂದ್ರಅರಸ್‌, ಕೋಟೆ ಪ್ರಭಾಕರ್‌, ಸುಮನ್‌,ಜಯರಾಜ್‌, ಸುಷ್ಮಿತಾ, ಪ್ರವೀಣ್‌ನಾಯಕ್‌ ಮುಂತಾ ದವರು “ಟಕೀಲಾ’ಚಿತ್ರದ ಮುಖ್ಯ ಭೂಮಿಕೆಯಲ್ಲಿಅಭಿನಯಿಸಿದ್ದಾರೆ. ಬೆಂಗಳೂರು, ದೇವರಾಯನದುರ್ಗ, ಸಕಲೇಶಪುರ ಸುತ್ತಮುತ್ತ “ಟಕೀಲಾ’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಸದ್ಯ “ಟಕೀಲಾ’ ಸಿನಿಮಾದ ಅಂತಿಮ ಹಂತದಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿನಿರತವಾಗಿರುವ ಚಿತ್ರತಂಡ, ಸೆಪ್ಟೆಂಬರ್‌ವೇಳೆಗೆ ಚಿತ್ರವನ್ನು ತೆರೆಗೆ ತರುವ ಯೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next