Advertisement

ಹೆಚ್ಚಿನ ನಗದು ವಿಥ್‌ಡ್ರಾ ಕೊರತೆಗೆ ಕಾರಣ: ಕೇಂದ್ರ

09:37 AM Apr 20, 2018 | Karthik A |

ನವದೆಹಲಿ: ಅಗತ್ಯಕ್ಕಿಂತ ಹೆಚ್ಚು ನಗದು ಹಿಂಪಡೆದಿರುವುದೇ ಸದ್ಯ ಉಂಟಾಗಿರುವ ಕೊರತೆಗೆ ಕಾರಣ ಎಂದು ಕೇಂದ್ರ ಸರ್ಕಾರ ಕಂಡುಕೊಂಡಿದೆ. ಆರಂಭದಲ್ಲಿ ಈ ಕೊರತೆ ಕಾಣಿಸಿಕೊಂಡದ್ದು ತೆಲಂಗಾಣದಲ್ಲಿ, ನಂತರ ಉತ್ತರ ಕರ್ನಾಟಕ, ಬಳಿಕ ಆಂಧ್ರಪ್ರದೇಶದಲ್ಲಿ ಈ ಕೊರತೆ ಕಾಣಿಸಿಕೊಂಡಿತ್ತು ಎಂದು ಮೂಲಗಳನ್ನು ಉಲ್ಲೇಖೀಸಿ ‘ಇಂಡಿಯಾ ಟುಡೇ’ ವರದಿ ಮಾಡಿದೆ. ಸಾರ್ವಜನಿಕರು ಎಟಿಎಂಗಳಿಂದ ಅಗತ್ಯಕ್ಕಿಂತ ಹೆಚ್ಚು ನಗದು ವಿಥ್‌ ಡ್ರಾ ಮಾಡಿದ್ದರಿಂದ ಈ ಕೊರತೆ ಉಂಟಾಗಿದೆ ಎಂಬ ವಾದವನ್ನು ಸರ್ಕಾರ ಒಪ್ಪಿಕೊಂಡಿಲ್ಲ.

Advertisement

ಇದೇ ವೇಳೆ ಆದಾಯ ತೆರಿಗೆ ಕಂಡುಕೊಂಡ ಮಾಹಿತಿ ಪ್ರಕಾರ ದಕ್ಷಿಣದ ಮೂರು ರಾಜ್ಯಗಳಲ್ಲಿರುವ ಗುತ್ತಿಗೆದಾರರು, ವ್ಯಾಪಾರಸ್ಥರು, ಕೃಷಿ ಸಂಬಂಧಿತ ಉದ್ಯಮಿಗಳು ಮಾರ್ಚ್‌ ತಿಂಗಳ ಎರಡನೇ ವಾರದಿಂದ ಭಾರಿ ಪ್ರಮಾಣದಲ್ಲಿ ಚೆಕ್‌ ಮತ್ತು ಇತರ ಮಾರ್ಗದ ಮೂಲಕ ಪಾವತಿ ಮಾಡಲು ಆರಂಭಿಸಿದ್ದರು ಎಂದು ಮೂಲಗಳು ಹೇಳಿವೆ. ಅದಕ್ಕೆ ಪೂರಕವಾಗಿ ತೆರಿಗೆ ಇಲಾಖೆ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ ಕಾರ್ಯಚರಣೆ ನಡೆಸಿತ್ತು. ಈ ಹಂತದಲ್ಲಿ ಉದ್ಯಮಿಯೊಬ್ಬರು ಕೆಲವೇ ಗಂಟೆಗಳ ಅವಧಿಯಲ್ಲಿ 20 ಬಾರಿ ಅತ್ಯಧಿಕ ಮೊತ್ತವನ್ನು ಪಾವತಿ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.

POSನಲ್ಲಿ 2 ಸಾವಿರ ಶುಲ್ಕ ರಹಿತ ವಿತ್‌ಡ್ರಾ : ನಗದು ಕೊರತೆ ನೀಗಲು ಎಸ್‌ಬಿಐ ಕ್ರಮ
ನಗದು ಕೊರತೆ ನಿವಾರಿಸಲು ಪಾಯಿಂಟ್‌ ಆಫ್ ಸೇಲ್ಸ್‌ ಮಷಿನ್‌ ಗಳ ಮೂಲಕ ಸಣ್ಣ ಪಟ್ಟಣಗಳಲ್ಲಿ ಪ್ರತಿ ದಿನ 2 ಸಾವಿರ ರೂ. ವರೆಗೆ ವಿಥ್‌ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅದಕ್ಕೆ ಯಾವುದೇ ರೀತಿಯಲ್ಲಿ ಶುಲ್ಕ ವಿಧಿಸಲಾಗುತ್ತಿಲ್ಲ ಎಂದು SBI ಟ್ವೀಟ್‌ ಮೂಲಕ ಮಾಹಿತಿ ನೀಡಿದೆ. SBI ಮತ್ತು ಇತರ ಯಾವುದೇ ಬ್ಯಾಂಕ್‌ನ ಡೆಬಿಟ್‌ ಕಾರ್ಡ್‌ ಮೂಲಕ ಮೂರನೇ ಹಂತದ ನಗರ ಪ್ರದೇಶಗಳಲ್ಲಿ 1 ಸಾವಿರ ರೂ. ವರೆಗೆ ವಿಥ್‌ ಡ್ರಾ ಮಾಡಲು ಅವಕಾಶವಿದೆ. 1 ಮತ್ತು 2ನೇ ಹಂತದ ನಗರಗಳಲ್ಲಿ ಶುಲ್ಕ ರಹಿತವಾಗಿ 1 ಸಾವಿರ ರೂ. ವಿಥ್‌ಡ್ರಾಕ್ಕೆ ಅವಕಾಶವಿದೆ ಎಂದು SBIನ ಮುಖ್ಯ ನಿರ್ವಹಣಾ ಅಧಿಕಾರಿ ನೀರಜ್‌ ವ್ಯಾಸ್‌ ತಿಳಿಸಿದ್ದಾರೆ. 

ಇಂದು ಮುಕ್ತಾಯ: ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ಉಂಟಾಗಿರುವ ನಗದು ಕೊರತೆ ಶುಕ್ರವಾರದ ಒಳಗಾಗಿ ಕೊನೆಗೊಳ್ಳಲಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್‌ ಕುಮಾರ್‌ ಹೇಳಿದ್ದಾರೆ. ನಗದು ಕೊರತೆ ಇರುವ ಪ್ರದೇಶಗಳಿಗೆ ಈಗಾಗಲೇ ಪೂರೈಕೆ ಮಾಡಲಾಗುತ್ತಿದೆ. ದೇಶದಲ್ಲಿ ಹಣ ಎನ್ನುವುದು ಚಾಲನೆಯಲ್ಲಿರಬೇಕು. ಜನರು ತಮ್ಮ ಬಳಿಯಲ್ಲಿಯೇ ಅದನ್ನು ಇರಿಸಿಕೊಂಡಿದ್ದರೆ ಬ್ಯಾಂಕ್‌ ಗಳಿಗೂ ವಹಿವಾಟು ಕಷ್ಟವಾಗುತ್ತದೆ ಎಂದು ರಜನೀಶ್‌ ಕುಮಾರ್‌ ಹೇಳಿದ್ದಾರೆ.

ಮುಷ್ಕರದ ಎಚ್ಚರಿಕೆ: ಎಟಿಎಂಗಳಲ್ಲಿ ನಗದು ಪೂರೈಕೆಗೆ ಕೊರತೆ ಉಂಟಾಗಿರುವುದರಿಂದ ಸಾರ್ವಜನಿಕರು ಬ್ಯಾಂಕ್‌ ಅಧಿಕಾರಿಗಳ, ಉದ್ಯೋಗಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪರಿಸ್ಥಿತಿ ತಿಳಿಗೊಳಿಸದಿದ್ದರೆ ಮುಷ್ಕರ ನಡೆಸಬೇಕಾಗುತ್ತದೆ ಎಂದು ಅಖೀಲ ಭಾರತ ಬ್ಯಾಂಕ್‌ ಉದ್ಯೋಗಿಗಳ ಸಂಘದ (ಎಐಬಿಇಎ) ಪ್ರಧಾನ ಕಾರ್ಯದರ್ಶಿ ಸಿ.ಎಚ್‌.ವೆಂಕಟಾಚಲಂ ಗುರುವಾರ ಎಚ್ಚರಿಕೆ ನೀಡಿದ್ದಾರೆ. ನೋಟು ಅಮಾನ್ಯಗೊಂಡು 16 ತಿಂಗಳು ಕಳೆದರೂ ಎಟಿಎಂಗಳನ್ನು ಮೇಲ್ದರ್ಜೆಗೆ ಏರಿಸುವ ಕಾರ್ಯ ಇನ್ನೂ ಪೂರ್ತಿಗೊಂಡಿಲ್ಲ. RBI ಸಮರ್ಥವಾಗಿ ಪರಿಸ್ಥಿತಿ ನಿಭಾಯಿಸದ್ದೇ ಕೊರತೆಗೆ ಕಾರಣ ಎಂದು ಟೀಕಿಸಿದರು.

Advertisement

6.08 ಲಕ್ಷ : SBI ಹೊಂದಿರುವ POS
4.78 ಲಕ್ಷ : ಹಣ ವಿಥ್‌ಡ್ರಾ ಮಾಡುವ ವ್ಯವಸ್ಥೆ ಇರುವ POS

Advertisement

Udayavani is now on Telegram. Click here to join our channel and stay updated with the latest news.

Next