Advertisement

ವಿಜಯಪುರ: ಕಳ್ಳಕವಟಗಿ ಸಂಗಮನಾಥ ದೇವಸ್ಥಾನದ ಪಂಚಲೋಹದ ಮೂರ್ತಿ ಕಳ್ಳತನ

09:12 AM Jul 13, 2022 | Team Udayavani |

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ ದೇವಸ್ಥಾನದ ಪಂಚಲೋಹದ ಮೂರ್ತಿ ಕಳ್ಳತನವಾಗಿರುವ ಘಟನೆ ಜರುಗಿದೆ.

Advertisement

ಅರ್ಚಕ ಮಲ್ಲಯ್ಯ ಮಠಪತಿ ಎಂದಿನಂತೆ ಸೂರ್ಯೋದಯಕ್ಕೆ ಮುನ್ನ ಪೂಜೆ ಮಾಡಲು ದೇವಸ್ಥಾನಕ್ಕೆ ತೆರಳಿದಾಗ, ಸಂಗಮನಾಥ ದೇವರ ಪಂಚ ಲೋಹದ ಮೂರ್ತಿ ಕಳ್ಳತನ ಆಗಿರುವುದು ಪತ್ತೆಯಾಗಿದೆ. ಕೂಡಲೇ ಗ್ರಾಮಸ್ಥರಿಗೆ ವಿಷಯ ಮುಟ್ಟಿಸಿದ್ದಾನೆ.

ಸುಮಾರು 2 ಲಕ್ಷ ರೂ. ಮೌಲ್ಯದ ಪಂಚಲೋಹದಿಂದ ಮಾಡಿದ ಸಂಗಮನಾಥನ ಬೃಹತ್ ಮೂರ್ತಿ, ಬಸವಣ್ಣನ ಮೂರ್ತಿ ಮಾತ್ರವಲ್ಲದೆ ದೇವಸ್ಥಾನದ ಇತರೆ ಹಿತ್ತಾಳೆ ಸಾಮಾನುಗಳನ್ನು ಕದ್ದ ಕಳ್ಳರು ಪರಾರಿಯಾಗಿದ್ದಾರೆ.

ದೇವಸ್ಥಾನದ ಬಾಗಿಲಿನ ಕೀಲಿ ಮುರಿದಿರುವ ಕಳ್ಳರು, ಚಪ್ಪಲಿ ಹಾಕಿಕೊಂಡೇ ದೇವಸ್ಥಾನದ ಗರ್ಭಗುಡಿ ಪ್ರವೇಶ ಮಾಡಿದ್ದು, ಚಪ್ಪಲಿ ಹೆಜ್ಜೆ ಗುರುತು ಮೂಡಿವೆ.

Advertisement

ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರುವ ತಿಕೋಟಾ ಪಿಎಸ್ಐ ಶಶಿಕಲಾ ಲಂಗೋಟಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next