Advertisement

Ayodhya: ಮಂದಿರ ಉದ್ಘಾಟನೆ- ಅದಾನಿ, ಅಮಿತಾಭ್‌, ಸಚಿನ್‌ಗೆ ಆಹ್ವಾನ

12:34 AM Dec 07, 2023 | Team Udayavani |

ಅಯೋಧ್ಯಾ: ಶ್ರೀರಾಮ ಮಂದಿರದಲ್ಲಿ ಬಾಲರಾಮನ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಜ. 22ಕ್ಕೆ ನಡೆಯಲಿದೆ. ಇದಕ್ಕೆ 7,000 ಗಣ್ಯ ರಿಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಆಹ್ವಾನ ನೀಡಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಉಪಸ್ಥಿತಿಯಲ್ಲಿ ಕಾರ್ಯ ಕ್ರಮಗಳು ಜರಗಲಿವೆೆ.

Advertisement

ಗಣ್ಯ ಆಹ್ವಾನಿತರ ಪಟ್ಟಿಯಲ್ಲಿ ಬಾಲಿವುಡ್‌ ದಿಗ್ಗಜರಿಂದ ಹಿಡಿದು ಖ್ಯಾತ ವಾಣಿಜ್ಯೋದ್ಯಮಿಗಳೂ ಇದ್ದಾರೆ. ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌, ಗಾಯಕಿ ಆಶಾ ಭೋಸ್ಲೆೆ, ಅಕ್ಷಯ್‌ ಕುಮಾರ್‌, ಕಂಗನಾ ರಾಣಾವತ್‌, ಕ್ರಿಕೆಟಿಗರಾದ ಸಚಿನ್‌ ತೆಂಡುಲ್ಕರ್‌, ವಿರಾಟ್‌ ಕೊಹ್ಲಿ, ವಾಣಿಜ್ಯೋದ್ಯಮಿಗಳಾದ ಗೌತಮ್‌ ಅದಾನಿ, ಮುಕೇಶ್‌ ಅಂಬಾನಿ, ರತನ್‌ ಟಾಟಾರಿಗೆ ಕರೆ ನೀಡಲಾಗಿದೆ. ಅಯೋಧ್ಯಾ ರಾಮಜನ್ಮಭೂಮಿ ಹೋರಾಟದಲ್ಲಿ ಪ್ರಾಣಬಿಟ್ಟ 50 ಕರಸೇವಕರ ಕುಟುಂಬಗಳಿಗೂ ಆಹ್ವಾನ ನೀಡಲಾಗಿದೆ. ರಾಮ ಜನ್ಮಭೂಮಿಯ ಕನಸನ್ನು ನನಸಾಗಿಸಲು ಬೆಂಬಲ ನೀಡಿದ ಪತ್ರಕರ್ತರೂ ಆಹ್ವಾನಿತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next