Advertisement

ತವರಿಗೆ ಬರುವ ತವಕದಲ್ಲಿ ಮಸಣ ಸೇರಿದ 7 ಜನ: ತೆಲಂಗಾಣದಿಂದ ರಾಯಚೂರಿಗೆ ಬರುವಾಗ ದುರ್ಘಟನೆ

09:28 AM Mar 29, 2020 | keerthan |

ರಾಯಚೂರು: ಕೋವಿಡ್-19 ಹಾವಳಿಯಿಂದ ತಪ್ಪಿಸಿಕೊಳ್ಳಲು ತೆಲಂಗಾಣದ ಸೂರ್ಯಪೇಟದಿಂದ ತಮ್ಮೂರಿಗೆ ಬರುತ್ತಿದ್ದ ಏಳು ಜನ ಅಪಘಾತದಲ್ಲಿ ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ತಡರಾತ್ರಿ ತೆಲಂಗಾಣದ ಶಂಷಾಬಾದ್ ಬಳಿ ನಡೆದಿದೆ.

Advertisement

ಕೂಲಿಕಾರ್ಮಿಕರಿದ್ದ ಬುಲೆರೋ ಮ್ಯಾಕ್ಸ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ರಾಯಚೂರು ಮೂಲದ ಇಬ್ಬರು ಚಿಕ್ಕಮಕ್ಕಳು, ಇಬ್ಬರು ಮಹಿಳೆಯರು, ಮೂವರು ಪುರುಷರು ಸೇರಿ ಏಳು ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.

ಇವರೆಲ್ಲರೂ ಕೋವಿಡ್-19 ಭೀತಿ ಹಿನ್ನೆಲೆ ಸ್ವಗ್ರಾಮಕ್ಕೆ ಹಿಂದಿರುಗುತ್ತಿದ್ದರು. ಕೂಲಿಕೆಲಸಕ್ಕಾಗಿ ಸೂರ್ಯಪೇಟಕ್ಕೆ ಗುಳೆ ಹೋಗಿದ್ದ ಇವರು ತೆಲಂಗಾಣದ ರಾಯಚೂರಿಗೆ ಬರುವಾಗ ಅಪಘಾತ ಸಂಭವಿಸಿದೆ.

ಟ್ರಕ್ ನಲ್ಲಿ ಒಟ್ಟು 30 ಜನ ಕಾರ್ಮಿಕರಿದ್ದರು. ಆರು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಲ್ಲಿ ರಾಯಚೂರು ಮತ್ತು ಬಾಗಲಕೋಟೆ ಜಿಲ್ಲೆ ಮೂಲದವರಿದ್ದಾರೆ.

ಗಾಯಾಳುಗಳನ್ನು ಶಂಷಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಷಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next