Advertisement

ಜಾತಿಗಣತಿ ನಡೆಸಲು ತೆಲಂಗಾಣ ಸಂಪುಟ ಸಮ್ಮತಿ

12:33 AM Feb 06, 2024 | Team Udayavani |

ಹೈದರಾಬಾದ್‌: ತೆಲಂಗಾಣದ ಕಾಂಗ್ರೆಸ್‌ ಸರಕಾರ ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ತೀರ್ಮಾನಿಸಿದೆ. ಈ ಬಗ್ಗೆ ಸಿಎಂ ರೇವಂತ್‌ ರೆಡ್ಡಿ ನೇತೃತ್ವದ ಸಂಪುಟ ಸಭೆ ಯಲ್ಲಿ ತೀರ್ಮಾನಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಬಜೆಟ್‌ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ನಡೆದಿದ್ದ ಚುನಾವಣೆಯಲ್ಲಿ ಜಾತಿ ಗಣತಿ ನಡೆಸುವ ಬಗ್ಗೆ ವಾಗ್ಧಾನ ಮಾಡಿತ್ತು.

Advertisement

ಇದಲ್ಲದೆ ತೆಲಂಗಾಣವನ್ನು ಸಂಕ್ಷಿಪ್ತವಾಗಿ “ಟಿಎಸ್‌’ ಅನ್ನುವಂತಿಲ್ಲ, ಬದಲಾಗಿ “ಟಿಜಿ’ ಎನ್ನು ಬದಲಿಸುವ ಬಗ್ಗೆಯೂ ತೀರ್ಮಾನಿಸಲಾಗಿದೆ. ಹಿಂದಿನ ಭಾರತ್‌ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಸರಕಾರ ತನ್ನ ಪಕ್ಷದ ಹೆಸರಿಗೆ ಹೋಲಿಕೆ ಮಾಡಿಕೊಂಡು, ತೆಲಂಗಾಣವನ್ನು ಸಂಕ್ಷಿಪ್ತವಾಗಿ “ಟಿಎಸ್‌’ ಎಂದು ಕರೆ ಯಲು ಆರಂಭಿಸಿ ತು. ಆದರೆ ವಾಸ್ತವದಲ್ಲಿ ಅದು “ಟಿಜಿ’ ಆಗಬೇಕು. ಹೀಗಾಗಿ ಇದನ್ನು ಟಿಜಿ ಎಂದು ಬದಲಾಯಿಸುತ್ತಿದ್ದೇವೆ ಎಂದು ಸರಕಾರ ಮಾಹಿತಿ ನೀಡಿದೆ.

ರಾಜ್ಯಕ್ಕೆ ಹೊಸ ನಾಡಗೀತೆಯನ್ನು ಅಳವಡಿಸಿಕೊಳ್ಳಲು ಮತ್ತು ನಾಡದೇವತೆ “ತೆಲಂಗಾಣ ತಲ್ಲಿ’ಗೆ ಹೊಸ ರೂಪ ನೀಡುವುದಕ್ಕೂ ಸಂಪುಟದ ಅನುಮತಿ ಸಿಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next