Advertisement

ಸೈನಿಕರಿಗೆ ಪದಕ ಅರ್ಪಿಸಿದ ತೇಜಸ್ವಿನಿ ಸಾವಂತ್‌

06:35 AM Apr 20, 2018 | |

ಹೊಸದಿಲ್ಲಿ: ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಶೂಟರ್‌ ತೇಜಸ್ವಿನಿ ಸಾವಂತ್‌ ತನ್ನ ಪದಕವನ್ನು ಯುದ್ಧದಲ್ಲಿ ಕಾಲು ಕಳೆದುಕೊಂಡ ಸೈನಿಕರಿಗೆ ಅರ್ಪಿಸಿದ್ದಾರೆ.

Advertisement

ಪುಣೆಯಲ್ಲಿರುವ ಕೃತಕ ಕಾಲಿನ ಜೋಡಣೆ ಕೇಂದ್ರಕ್ಕೆ ತೇಜಸ್ವಿನಿ ಗುರುವಾರ ಭೇಟಿ ನೀಡಿದರು. ಈ ವೇಳೆ ಯುದ್ಧದಲ್ಲಿ ಕಾಲುಕಳೆದುಕೊಂಡ ಸೈನಿಕರ ಜತೆಗೆ ಕೆಲ ಹೊತ್ತು ತೇಜಸ್ವಿನಿ ಮಾತನಾಡಿದರು. “ಸೈನಿಕರ ಪರಿಸ್ಥಿತಿ ಕಂಡು ಅತೀವ ನೋವಾಗಿದೆ. ಕಣ್ಣುಗಳಲ್ಲಿ ನೀರು ತುಂಬಿಕೊಂಡಿದ್ದೇನೆ. ಇವರನ್ನು ಭೇಟಿಯಾದ ಸಂದರ್ಭದಲ್ಲಿ ಇವರ ಕಷ್ಟಗಳನ್ನು ನೆನೆದು ಬೇಸರವಾಗಿದೆ’ ಎಂದು ತೇಜಸ್ವಿನಿ ಸಾವಂತ್‌ ತಿಳಿಸಿದ್ದಾರೆ. ತೇಜಸ್ವಿನಿ ಕಾಮನ್ವೆಲ್ತ್‌ ಗೇಮ್ಸ್‌ನ 50 ಮೀ. ಶೂಟಿಂಗ್‌ನ ರೈಫ‌ಲ್‌3 ಪೊಸಿಷನ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next