Advertisement

ಹುಮನಾಬಾದ ತಹಶೀಲ್ದಾರ್‌ ಹಿರೇಮಠ ಬಂಧನಕ್ಕೆ ಆಗ್ರಹ

03:29 PM Feb 14, 2022 | Team Udayavani |

ಬೀದರ: ಹುಮನಾಬಾದ್‌ ತಹಶೀಲ್ದಾರ್‌ ಡಾ| ಪ್ರದೀಪಕುಮಾರ ಹಿರೇಮಠ ಅವರನ್ನು ಬಂಧಿಸಿ ಬಿಎಸ್‌ಪಿ ಪಕ್ಷದ ಬಂಧಿತ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆಗೆ ಕ್ರಮ ವಹಿಸುವಂತೆ ದಲಿತ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. ಈ ಕುರಿತು ನಗರಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಅವರಿಗೆ ಒಕ್ಕೂಟದ ಪ್ರಮುಖರು ಮನವಿ ಸಲ್ಲಿಸಿದ್ದಾರೆ.

Advertisement

ರಾಯಚೂರಿನಲ್ಲಿ ನ್ಯಾಯಾಧೀಶರಿಂದ ಅಂಬೇಡ್ಕರ್‌ ಭಾವಚಿತ್ರಕ್ಕೆ ಅಪಮಾನ ಖಂಡಿಸಿ ಹುಮನಾಬಾದ್‌ನಲ್ಲಿ ಮನವಿ ಸಲ್ಲಿಸಲು ಮುಂದಾಗಿದ್ದ ಹೋರಾಟಗಾರರಿಂದ ಮನವಿ ಸ್ವೀಕರಿಸಲು ವಿಳಂಬ ನೀತಿ ಅನುಸರಿಸದ್ದನ್ನು ಖಂಡಿಸಿ ಹೊರಾಟಗಾರರ ಮತ್ತು ತಹಶೀಲ್ದಾರ್‌ ಮಧ್ಯೆ ಸಣ್ಣ ಘಟನೆ ನಡೆದಿದೆ ಎಂದು ಹೇಳಿದೆ.

ಘಟನೆ ಸಂಬಂಧ ಹೋರಾಟಗಾರರನ್ನು ಜೈಲಿಗಟ್ಟಲಾಗಿದೆ. ಆದರೆ, ತಹಶೀಲ್ದಾರ್‌ ವಿರುದ್ಧ ಅಟ್ರಾಸಿಟಿ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದರೂ ಬ್ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುವ ನೆಪದಲ್ಲಿ ಬಚಾವ ಆಗುವ ಹುನ್ನಾರ ನಡೆಸುತ್ತಿದ್ದಾರೆ. ವೈದ್ಯರು ಸಹ ಅವರನ್ನು ಬಚಾವ್‌ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವೇಳೆ ಒಕ್ಕೂಟದ ಅಧ್ಯಕ್ಷ ಅಂಬಾದಾಸ ಗಾಯಕವಾಡ, ದಲಿತ ಪರ ಸಂಘಟನೆಗಳ ಪ್ರಮುಖರಾದ ರಮೇಶ ಡಾಕುಳಗಿ, ರಾಜಕುಮಾರ ಮೂಲ ಭಾರತಿ, ಬಾಬುರಾವ್‌ ಪಾಸ್ವಾನ್‌, ಕಲ್ಯಾಣರಾವ್‌ ಭೋಸ್ಲೆ, ನಾಗೇಂದ್ರ ದಂಡೆ, ವಹೀದ್‌ ಲಖನ್‌, ಚಂದ್ರಕಾಂತ ನಿರಾಟೆ, ಶ್ರೀಪತರಾವ್‌ ದೀನೆ, ಉಮೇಶಕುಮಾರ ಸ್ವಾರಳ್ಳಿಕರ್‌, ಶಿವಕುಮಾರ ನೀಲಿಕಟ್ಟಿ, ರವಿಕುಮಾರ ವಾಘಮಾರೆ, ಬಕ್ಕಪ್ಪ ದಂಡಿನ್‌, ಶಾಲಿವಾನ್‌ ಬಡಿಗೆರ್‌, ಬಾಬು ಮಿಠಾರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next