Advertisement
ಕಾಮನ್ವೆಲ್ತ್ ಚಿನ್ನ ಪುರಸ್ಕೃತ ಕ್ರೀಡಾಪಟು ಪ್ರದೀಪ್ ಕುಮಾರ್ ಅವರು, ಟೀಮ್ ಮೋದಿ ಜಿಲ್ಲಾ ಸಂಪರ್ಕ ಪ್ರಮುಖ್ ಭಾಸ್ಕರ್ ಮಂಗಳೂರು ಅವರಿಗೆ ರಾಷ್ಟ್ರಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು.ಟೀಂ ಮೋದಿ ವಕ್ತಾರ ಅರುಣ್ ಶೇಟ್ ಮಾತನಾಡಿ, 2014ರ ಹಿಂದೆ ಮಾಧ್ಯಮಗಳಲ್ಲಿ ಸಾಲು ಸಾಲು ಹಗರಣಗಳ ಸರಮಾಲೆಯೇ ಕಣ್ಣ ಮುಂದೆ ಬರುತ್ತಿತ್ತು. ಆದರೆ ಇಂದು ಭಾರತ ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ ಎಂದರು.
ಕೇಂದ್ರ ಸರಕಾರದ ಮುದ್ರಾ ಯೋಜನೆ ಫಲಾನುಭವಿ ಸುಮಾ ಕೋಡಿಕಲ್ ಮಾತನಾಡಿ, ಮೋದಿ ಯವರು ಮತ್ತೂಮ್ಮೆ ಪ್ರಧಾನಿಯಾಗಿ ಮತ್ತಷ್ಟು ಜನರ ಜೀವನ ಹಸನಾಗ ಬೇಕು. ಇದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕು ಎಂದರು.
ಭಾರತದ ವರ್ಚಸ್ಸನ್ನು ಮೋದಿ ವೃದ್ಧಿಸಿದ ರೀತಿ ಶ್ಲಾಘನೀಯ ಎಂದರು. ಸಮಿತ್, ಸುಶಾಂತ್, ಅಶೋಕ್, ದಯಾ ಆಕಾಶ್, ಚೈತ್ರಾ, ಭವ್ಯಾ, ಜಾಥಾದ ಮುಂದಾಳತ್ವ ವಹಿಸಿ ಕೊಂಡಿದ್ದರು. ಶ್ರೀಪತಿ ಸ್ವಾಗತಿಸಿದರು. ಮೋದಿ ಸಾಧನೆಗಳ ಪ್ರಚಾರ ಸಂಬಂಧ ನಗರದ ಮೀನು ಮಾರುಕಟ್ಟೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಮೀನುಗಾರ ಮಹಿಳೆಯರು ಚಾಲನೆ ನೀಡಿದರು. ಮೋದಿ ಬಾಲ್ಯ ದಲ್ಲಿ ಚಹಾ ಮಾರುತ್ತಿದ್ದುದನ್ನು ನೆನಪಿಸುವ ಅಂಗವಾಗಿ ಚಹಾ ವಿತರಿಸಲಾಯಿತು.