Advertisement

ಶಿಕ್ಷಕರ ಪರಿಶ್ರಮದಿಂದ ಉತ್ತಮ ಫ‌ಲಿತಾಂಶ

01:25 PM Sep 06, 2020 | Suhan S |

ಚಿಂತಾಮಣಿ: ಎಸ್‌ಎಸ್‌ಎಲ್‌ಸಿ ಫ‌ಲಿತಾಂಶದಲ್ಲಿ ಜಿಲ್ಲೆ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯಲು ಜಿಲ್ಲೆಯ ಶಿಕ್ಷಕರ ಪರಿಶ್ರಮ ಕಾರಣ ಎಂದು ಊಲವಾಡಿ ಗ್ರಾಪಂ ಪಿಡಿಒ ಕೆ.ಆರ್‌.ಮಂಜುನಾಥ್‌ ನುಡಿದರು.

Advertisement

ಬೂರಗಮಾಕಲಹಳ್ಳಿ ಸರ್ಕಾರಿ ಪ್ರೌಢ ಶಾಲೆಗೆ 2019-2020ನೇ ಸಾಲಿನಲ್ಲಿ ಶೇ. 100 ರಷ್ಟು ಫ‌ಲಿತಾಂಶ ಬಂದ ಹಿನ್ನೆಲೆಯಲ್ಲಿ ಶಿಕ್ಷಕರ ದಿಣಾಚರಣೆ ಅಂಗವಾಗಿಶಾಲಾ ಶಿಕ್ಷಕರಿಗೆ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಿ ಅವರು ಮಾತನಾಡಿದರು.  ನಾನು ಈ ಶಾಲೆಯನ್ನು ಅನೇಕ ವರ್ಷಗಳಿಂದ ನೋಡುತ್ತಿದ್ದೇನೆ. ಈ ಬಾರಿ ಶೇ.100 ಫ‌ಲಿತಾಂಶ ಪಡೆದಿರುವುದರಿಂದ ಜೊತೆಗೆ ನಾನು ಈ ಭಾಗದಲ್ಲಿ ಪಿಡಿಒ ಆಗಿ ಕೆಲಸ ನಿರ್ವಹಿಸುವ ಸಮಯದಲ್ಲಿ ಅತ್ಯುತ್ತಮ ಸಾಧನೆ ತೋರಿರುವುದು ಸಂತಸ ತಂದಿದೆ ಎಂದರು.

ಇದೇ ರೀತಿ ಮುಂದೆಯೂ ಕೂಡ ಶಿಕ್ಷಕರು ಉತ್ತಮ ಬೋಧನೆ ಮಾಡಿ ಶಾಲೆ ಉತ್ತಮ ಫ‌ಲಿತಾಂಶ ದಾಖಲಿಸಲು ನೆರವಾಗಬೇಕು. ಶಾಲೆಗೆ ಪಂಚಾಯತಿ ವತಿಯಿಂದ ಸಿಗಬೇಕಾದ ಮೂಲ ಸೌಲಭ್ಯ ವ್ಯವಸ್ಥೆ ಕಲ್ಪಿಸಿದ್ದು, ಮುಂದೆಯೂ ಸೌಕರ್ಯ ಒದಗಿಸಲಾಗುವುದು ಎಂದು ಹೇಳಿದರು. ಊಲವಾಡಿ ಗ್ರಾಪಂ ಆಡಳಿತಾಧಿಕಾರಿ ಹಾಗೂ ಎಪಿಎಂಸಿ ಕಾರ್ಯದರ್ಶಿ ಉಮಾ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಶೇ.100 ರಷ್ಟು ಫ‌ಲಿತಾಂಶ ಪಡೆದ ಕಾರಣ ಸನ್ಮಾನಿಸುತ್ತಿರುವುದು ಸಂತೋಷವಾಗುತ್ತಿದೆ ಎಂದರು.

ಊಲವಾಡಿ ಗ್ರಾಪಂ ವತಿಯಿಂದ ಶಾಲಾ ಮುಖ್ಯೋಪಾಧ್ಯಾಯ ಆರ್‌.ನಾರಾಯಣರೆಡ್ಡಿ, ಶಿಕ್ಷಕರಾದ ಎಂ.ಎನ್‌.ಭಾಗ್ಯಲಕ್ಷ್ಮೀ, ಕಾಂಚನ, ಯಶೋಧಮಣಿ, ನವೀನ್‌ಕುಮಾರ್‌, ಜಿ. ಲಕ್ಷಿ¾àದೇವಮ್ಮ, ಬಾಷಾಸಾಬ್‌, ಪ್ರಥಮ ದರ್ಜೆ ಸಹಾಯಕ ಮಲ್ಲಿಕಾರ್ಜುನ್‌, ಶಿವಾನಂದ್‌ ಅವರನ್ನು ಸನ್ಮಾನಿಸಿದರು. ಉಪನ್ಯಾಸಕ ಸಂಘದ ಜಿಲ್ಲಾಧ್ಯಕ್ಷ ಮುನಿರೆಡ್ಡಿ, ಗ್ರಾಪಂ ಕಾರ್ಯದರ್ಶಿ ಆರ್‌.ವೆಂಕಟೇಶ್‌, ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next