Advertisement

ಗುರುಕುಲ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

02:33 PM Sep 06, 2017 | Team Udayavani |

ಕಲಬುರಗಿ: ಶಿಕ್ಷಕರಾಗಿದ್ದವರು ರಾಷ್ಟ್ರದ ಉನ್ನತ ಹುದ್ದೆ ಅಲಂಕರಿಸಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಇಂದಿನ ಶಿಕ್ಷಕರಿಗೆ ಮಾದರಿಯಾಗಿದ್ದಾರೆ ಎಂದು ಅಪ್ಪಾಜಿ ಗುರುಕುಲ ಶಿಕ್ಷಣ ಟ್ರಸ್ಟ್‌ ಅಧ್ಯಕ್ಷೆ ಭಾಗಮ್ಮ ರಾಜಕುಮಾರ ಉದನೂರ ಹೇಳಿದರು.

Advertisement

ಉದನೂರಿನಲ್ಲಿರುವ ಅಪ್ಪಾಜಿ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಕ್ಷಕರಾದವರು, ಕ್ಷಮೆ, ಶೀಲ, ಕರುಣೆ ಮೈಗೂಡಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಮತ ಹಾಕಿ ಚುನಾವಣೆ ಮೂಲಕ ಉತ್ತಮ ಶಿಕ್ಷಕರನ್ನು ಆಯ್ಕೆ ಮಾಡಿ ಪವಿತ್ರಾ ರದ್ದೆವಾಡಗಿ, ಶ್ರೀಕಾಂತ ಕುಲಕರ್ಣಿ, ಪೂಜಾ ಸುರಪುರ ಅವರನ್ನು ಸತ್ಕರಿಸಿದರು. 

ಶಿಕ್ಷಕರ ದಿನಾಚರಣೆ ನಿಮಿತ್ತ ಆಯೋಜಿಸಿದ್ದ ವಿವಿಧ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಶಿಕ್ಷಕರಿಗೆ ಬಹುಮಾನ ವಿತರಿಸಲಾಯಿತು. ಹರೀಶ ಕುಲಕರ್ಣಿ, ಶೀಲಾ ಹೊಸಮಠ, ಶ್ರೀದೇವಿ ಪಾಂಚಾಳ, ಸುನಿತಾ ದೇಶಪಾಂಡೆ, ಸಿದ್ದಮ್ಮ ಮಠಪತಿ, ಕಾವೇರಿ ಹಿರೇಮಠ, ಆನಂದ, ಪ್ರಕಾಶ  ಹೀರಾಪುರ, ರೇಖಾ ಸುಲೇಪೇಟ, ಪೂಜಾ ಬೆಲ್ಲದ, ಅಮರೇಶ ಹೀರಾಪುರ. ಮಾಲಾಶ್ರೀ, ಗುರುಲಿಂಗ ಮತ್ತಿತರಿದ್ದರು. ತ್ರಿಶೂಲ ಬಾಗಲಕೋಟೆ ನಿರೂಪಿಸಿದರು. ವೈಷ್ಣವಿ ಸ್ವಾಗತಿಸಿದರು. ಸೃಷ್ಟಿ ಮೈಲಾರಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next