Advertisement

TDP ಅಧ್ಯಕ್ಷ ಚಂದ್ರಬಾಬು ನಾಯ್ಡುಗೆ 14 ದಿನಗಳ ನ್ಯಾಯಾಂಗ ಬಂಧನ

08:31 PM Sep 10, 2023 | Team Udayavani |

ವಿಜಯವಾಡ: ತೆಲುಗು ದೇಶಂ(TDP) ಪಕ್ಷದ ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರನ್ನು ಭ್ರಷ್ಟಾಚಾರ ಆರೋಪದ ಪ್ರಕರಣದಲ್ಲಿ ಸೆಪ್ಟೆಂಬರ್ 10 ರಂದು ವಿಜಯವಾಡದ ಭ್ರಷ್ಟಾಚಾರ ವಿರೋಧಿ ಬ್ಯೂರೋ ನ್ಯಾಯಾಲಯವು ಸೆ 23 ರವರೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

Advertisement

ಏತನ್ಮಧ್ಯೆ, ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಸಂಬಂಧಿಸಿದ ಅಧಿಕಾರಿಗಳು ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ವಿಧಿಸಿದ್ದಾರೆ. ಆಂಧ್ರ ರಾಜ್ಯಾದ್ಯಂತ, ಮತ್ತು ಜನರು ಗುಂಪುಗಳಾಗಿ ಚಲಿಸದಂತೆ ಮತ್ತು ಯಾವುದೇ ಮಾರಣಾಂತಿಕ ಆಯುಧಗಳನ್ನು ಹೊಂದಿರದಂತೆ ಸೂಚಿಸಲಾಗಿದೆ.

ಸೆ10 ರಂದು ಬೆಳಗ್ಗೆ, ನಾಯ್ಡು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು, ಅಲ್ಲಿ ನ್ಯಾಯಮೂರ್ತಿ ಹಿಮಾ ಬಿಂದು ಅವರು ಸರಕಾರದ ಕಾನೂನು ವಕೀಲರು ಮತ್ತು ಟಿಡಿಪಿ ಮುಖ್ಯಸ್ಥರನ್ನು ಪ್ರತಿನಿಧಿಸುವವರ ವಾದವನ್ನು ಆಲಿಸಿದ್ದರು.

ಎನ್‌ಟಿಆರ್ ಕಮಿಶನರೇಟ್ ಪೊಲೀಸರು ಎಸಿಬಿ ವಿಶೇಷ ನ್ಯಾಯಾಲಯದ ಭದ್ರತೆಯನ್ನು ಬಿಗಿಗೊಳಿಸಿದ್ದರು. ಭಾನುವಾರ ಬೆಳಗಿನಿಂದ 10 ಗಂಟೆಗಳ ಸುದೀರ್ಘ ವಿಚಾರಣೆಯ ನಂತರ ವೈದ್ಯಕೀಯ ಪರೀಕ್ಷೆಗಳಿಗಾಗಿ ವಿಜಯವಾಡದ ಆಸ್ಪತ್ರೆಗೆ ಕರೆದೊಯ್ದ ನಂತರ ನಾಯ್ಡು ಅವರನ್ನು ಎಸ್‌ಐಟಿ ಕಚೇರಿಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಸಿಐಡಿ ಸೆ. 9 ರಂದು ಮಾಜಿ ಮುಖ್ಯಮಂತ್ರಿಯು 371 ಕೋಟಿ ರೂ. ಕೌಶಲ್ಯ ಅಭಿವೃದ್ಧಿ ಹಗರಣದಲ್ಲಿ ಪ್ರಧಾನ ಸಂಚುಕೋರ ಮತ್ತು ಆರೋಪಿ ನಂಬರ್ 1 ಎಂದು ಹೇಳಿದೆ. ಅಧಿಕಾರಿಗಳಿದ್ದ ವೇಳೆ ನಾಯ್ಡು ಅವರ ಸೂಚನೆಯ ಮೇರೆಗೆ ಸರಕಾರಿ ಆದೇಶವನ್ನು ಹೊರಡಿಸಲಾಗಿದ್ದು, ಸಾರ್ವಜನಿಕ ಖಜಾನೆಗೆ ನಷ್ಟ ಮತ್ತು ಖಾಸಗಿ ವ್ಯಕ್ತಿಗಳಿಗೆ ಲಾಭವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿದೆ ಎಂದು ಸಿಐಡಿ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next