Advertisement

“ವಿದ್ಯಾರ್ಥಿಗಳ ಬೆಳವಣಿಗೆಗೆ ಟಿಬಿಆರ್‌ಪಿ ತರಬೇತಿ ಉಪಯುಕ್ತ’

09:52 PM Apr 23, 2019 | Team Udayavani |

ಕಾರ್ಕಳ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ವಿಶೇಷ ತರಬೇತಿಗಳ ಮೂಲಕ ತಂತ್ರಜ್ಞಾನದೊಂದಿಗೆ ಪ್ರಾಯೋಗಿಕ ಜ್ಞಾನ ನೀಡುವುದೇ ಟಿಬಿಆರ್‌ಪಿ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಟಿಬಿಆರ್‌ಪಿಯಂತಹ ತರಬೇತಿ ಹೆಚ್ಚು ಉಪಯುಕ್ತ ಎಂದು ಉಡುಪಿ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲ ಚಂದ್ರಶೇಖರ್‌ ಎಚ್‌. ಅಭಿಪ್ರಾಯಪಟ್ಟರು.

Advertisement

ನಿಟ್ಟೆ ತಾಂತ್ರಿಕ ಮಹಾವಿ ದ್ಯಾಲಯದಲ್ಲಿ ಜೀಬ್ರಾ ಟೆಕ್ನಾಲಜೀಸ್‌ ಪ್ರಾಯೋಜಕತ್ವದ ಹಾಗೂ ಎಫ್‌.ಎ.ಇ.ಆರ್‌ ಸಹಯೋಗದಲ್ಲಿ ಸತತ ಏಳನೇ ವರ್ಷದ ಟೆಕ್ನಾಲಜಿ ಬ್ಯಾರಿಯರ್‌ ರಿಡಕ್ಷನ್‌ ಪ್ರೋಗ್ರಾಮ್‌(ಟಿಬಿಆರ್‌ಪಿ) ಗ್ರಾಮೀಣ ಪ್ರದೇಶದ ಮಕ್ಕಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಉಪಪ್ರಾಂಶುಪಾಲ ಡಾ| ಐ. ರಮೇಶ್‌ ಮಿತ್ತಂತಾಯ ಮಾತನಾಡಿ, ವಿದ್ಯಾರ್ಥಿಗಳು ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವುದು ಅತಿ ಮುಖ್ಯ. ಯಾವುದೇ ಕ್ಷೇತ್ರದಲ್ಲಾದರೂ ವೃತ್ತಿ ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಮುಂಚೆ ವೃತ್ತಿ ಕುರಿತಾಗಿ ತಿಳಿವಳಿಕೆ ಹೊಂದರಬೇಕೆಂದು ಹೇಳಿದರು.

ಪ್ರಾಂಶುಪಾಲ ಡಾ| ನಿರಂಜನ ಎನ್‌. ಚಿಪೂÛಣRರ್‌ ಅಧ್ಯಕ್ಷತೆ ವಹಿಸಿ, ನಿಟ್ಟೆ ಶಿಕ್ಷಣ ಸಂಸ್ಥೆಯು ಕೇವಲ ಪಠ್ಯಕ್ಕೆ ಮಾತ್ರ ಸೀಮಿತವಾಗಿರದೇ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಳನ್ನು ರೂಪಿಸಿದೆ. ಕಳೆದ 6 ವರ್ಷಗಳಲ್ಲಿ ಸುಮಾರು 180ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಟಿಬಿಆರ್‌ಪಿ ಶಿಬಿರದ ಪ್ರಯೋಜನ ಪಡೆದಿದ್ದಾರೆ ಎಂದು ತಿಳಿಸಿದರು.

ಟಿಬಿಆರ್‌ಪಿ ಸಂಯೋಜಕ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಜನಾರ್ದನ್‌ ನಾಯಕ್‌ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮೆಕ್ಯಾನಿಕಲ್‌ ವಿಭಾಗದ ಸಹಪ್ರಾಧ್ಯಾಪಕ ಗೌತಮ್‌ ಹೆಬ್ಟಾರ್‌ ನಿರೂಪಿಸಿ, ಇ.ಡಿ.ಸಿ. ವಿಭಾಗದ ಗೀತಾ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next