Advertisement

ಶೀಘ್ರ ಬದಲಾಗಲಿದೆ ತೆರಿಗೆ ನೀತಿ

11:57 PM Aug 19, 2019 | mahesh |

ಹೊಸದಿಲ್ಲಿ: 50 ವರ್ಷಗಳ ಹಳೆಯ ಆದಾಯ ತೆರಿಗೆ ಕಾನೂನಿಗೆ ನರೇಂದ್ರ ಮೋದಿ ಸರಕಾರ ಬದಲಾವಣೆ ತರಲಿದೆ. ಸಾರ್ವ  ಜನಿಕರಿಗೆ ಆದಾಯ ತೆರಿಗೆ ಪಾವತಿ ಮಾಡು ವುದನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಈ ಮಹತ್ವದ ಬದಲಾವಣೆ ಇರಲಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿ ಡಿಟಿ) ಸದಸ್ಯ ಅಖೀಲೇಶ್‌ ರಂಜನ್‌ ಅವರ ನೇತೃತ್ವದ ಕಾರ್ಯಪಡೆ ಈಗಾಗಲೇ ನೇರ ತೆರಿಗೆ ನೀತಿ ವರದಿಯನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಸೋಮವಾರ ಸಲ್ಲಿಸಿದೆ.

Advertisement

ಈ ಸಮಿತಿಯ ವರದಿಯನ್ನು ಜಾರಿಗೊಳಿಸಿ ದರೆ 1961ರಿಂದ ಜಾರಿಯಲ್ಲಿರುವ ಆದಾಯ ತೆರಿಗೆ ಕಾಯ್ದೆ ಮರೆಗೆ ಸರಿಯಲಿದೆ. ಮೋದಿ ಸರಕಾರದ ಹಿಂದಿನ ಅವಧಿಯಲ್ಲಿ ಅರುಣ್‌ ಜೇಟಿÉ ವಿತ್ತ ಸಚಿವರಾಗಿದ್ದಾಗ 2017 ನವೆಂ ಬರ್‌ನಲ್ಲಿ ಈ ಕಾರ್ಯಪಡೆಯನ್ನು ರಚನೆ ಮಾಡ ಲಾಗಿತ್ತು. 2019 ಮೇ 31ಕ್ಕೆ ಈ ಸಮಿತಿ ಅಂತಿಮ ವರದಿ ನೀಡಬೇಕಿತ್ತಾದರೂ, ಅವಧಿ ವಿಸ್ತರಣೆಯ ಅನಂತರ ಸೋಮವಾರ ವರದಿ ಸಲ್ಲಿಕೆಯಾಗಿದೆ. ಸಮಿತಿಯಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಗಿರೀಶ್‌ ಅಹುಜಾ, ಇವೈ ಮುಖ್ಯಸ್ಥ ರಾಜೀವ್‌ ಮೆಮಾನಿ, ತೆರಿಗೆ ವಕೀಲ ಮುಖೇಶ್‌ ಪಟೇಲ್‌, ಐಸಿಆರ್‌ಐಇಆರ್‌ ಸಲಹೆಗಾರ ಮನ್ಸಿ ಕೆದಿಯಾ ಹಾಗೂ ನಿವೃತ್ತ ಐಆರ್‌ಎಸ್‌ ಅಧಿಕಾರಿ ಜಿ.ಸಿ. ಶ್ರೀವಾಸ್ತವ ಸದಸ್ಯರಾಗಿದ್ದರು.

ಇದರಲ್ಲಿ ಕೇವಲ ನೌಕರರಿಗೆ ತೆರಿಗೆ ಪಾವತಿ ಸುಲಭಗೊಳಿಸುವುದಷ್ಟೇ ಅಲ್ಲ, ರಿಟರ್ನ್ ಸಲ್ಲಿಸುವವರಿಗೂ ಅನುಕೂಲ ಕಲ್ಪಿಸುವ ಸಾಧ್ಯತೆಗಳಿವೆ. ಇದರ ಒಟ್ಟು ಪರಿಣಾಮವಾಗಿ ತೆರಿಗೆ ದಾರರ ಸಂಖ್ಯೆ ಹೆಚ್ಚಳ ಕಾಣುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next