Advertisement

ಕ್ಷೇತ್ರದಲ್ಲಿ ಒಂದು ಲಕ್ಷ ಸಸಿ ನೆಡುವ ಗುರಿ

05:48 AM Jun 15, 2020 | Lakshmi GovindaRaj |

ಮಂಡ್ಯ: ನಗರ, ಹೋಬಳಿ ಮತ್ತು ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಗಳಲ್ಲಿ ಸುಮಾರು 1 ಲಕ್ಷ ಸಸಿ ಗಳನ್ನು ನೆಡುವ ಗುರಿ ಹೊಂದಿರುವುದಾಗಿ ಶಾಸಕ ಎಂ. ಶ್ರೀನಿವಾಸ್‌ ಹೇಳಿದರು. ತಾಲೂಕಿನ ಹನಕೆರೆ ಗ್ರಾಮದ ವಿವೇಕ ವಿದ್ಯಾಸಂಸ್ಥೆ ಆವರಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾಡಳಿತ, ಜಿಪಂ, ಸಾಮಾಜಿಕ ಅರಣ್ಯ ವಿಭಾಗ ಮತ್ತು ವಲಯ.

Advertisement

ಹನಕೆರೆ ಗ್ರಾಪಂ, ಹನಕೆರೆ ಎಂ.ಶ್ರೀನಿವಾಸ್‌ ಪ್ರತಿಷ್ಠಾನ, ಅನನ್ಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್‌ ಆಯೋಜಿಸಿದ್ದ  ಹಸಿರು ಕರ್ನಾಟಕ ಯೋಜನೆಯಡಿ ಮನೆಗೊಂದು ಗಿಡ ಊರಿಗೊಂದು ವನ ಅಭಿಯಾನದಲ್ಲಿ ಪಾಲ್ಗೊಂಡು ಮಾತನಾಡಿದರು. ಮನೆ ಮನೆಗಳಿಗೆ ಸಸಿ ವಿತರಿಸಲಾಗುತ್ತಿದ್ದು, ಅವುಗಳ ನ್ನು ಅವರೇ ಪೋಷಿಸಿ ಉತ್ತಮವಾಗಿ ಬೆಳೆಸಿದವರಿಗೆ ಪುರಸ್ಕಾರ  ನೀಡಲಾಗುವುದು.

ಗ್ರಾಮಗಳಲ್ಲಿ ಮರ ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ. ಗ್ರಾಪಂ ಪಿಡಿಒಗಳು ಸಸಿಗಳನ್ನು ಅರಣ್ಯ ಇಲಾಖೆಯಿಂದ ತರಿಸಿಕೊಡುವ ಜವಾಬ್ದಾರಿ ನಿಭಾಯಿಸಬೇಕು. ಹಸಿರು ಗ್ರಾಮ, ಸತ್ಛ ಪರಿಸರ, ನೈರ್ಮಲ್ಯಯುಕ್ತ ಗ್ರಾಪಂ ಮಾಡುವ ಸಂಕಲ್ಪಕ್ಕೆ ಮುನ್ನುಡಿಯಾಗಬೇಕಿದೆ ಎಂದು ತಿಳಿಸಿದರು. ಅರಣ್ಯ ಇಲಾಖೆ ವಲಯ ಅರಣ್ಯಾಧಿಕಾರಿ ಎಸ್‌.ಸಿ.ಜ್ಯೋತಿ ಮಾತನಾಡಿ, ಗ್ರಾಮೀಣ-ನಗರ ವ್ಯಾಪ್ತಿ ಯಲ್ಲಿ ಹಸಿರೀಕರಣ ಹೆಚ್ಚಿಸುವುದಕ್ಕಾಗಿ ಮನೆಗೊಂದು ಮರ- ಊರಿಗೊಂದು ವನ ಅಭಿಯಾನ ಆರಂಭವಾಗಿದೆ.

ಅರಣ್ಯ ಇಲಾಖೆ ವಾರ್ಷಿಕ ಸುಮಾರು ಒಂದು ಕೋಟಿ ಸಸಿ ನೆಡುವುದು ಮತ್ತು ಉತ್ತ ಮ ವಾಗಿ ಪೋಷಿ ಸುವ ಗುರಿ ಸಾಧಿಸಲು ಮುಂದಾಗಿದೆ ಎಂದು ತಿಳಿಸಿದರು. ಜಿಪಂ ಸದಸ್ಯ  ಎಚ್‌.ಎನ್‌.ಯೋಗೇಶ್‌, ಉಪ ವಲಯ ಅರಣ್ಯಾಧಿಕಾರಿ ಬೆಟ್ಟಯ್ಯ, ಅರಣ್ಯ ಪ್ರೇರಕ ರಾದ ದೇವರಾಜು, ಸುವರ್ಣ, ಅನನ್ಯ ಸಾಮಾಜಿಕ ಹಾಗೂ ಅನುಪಮಾ, ತಾಳಶಾಸನ ಮೋಹನ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next