Advertisement

ಎಚ್‌.ಡಿ.ಕೋಟೆ:ಟ್ಯಾಂಕರ್‌ ಢಿಕ್ಕಿ,ಬೈಕ್‌ನಲ್ಲಿದ್ದ ಮೂವರ ದಾರುಣ ಸಾವು

02:24 PM Jan 31, 2017 | Team Udayavani |

ಎಚ್‌.ಡಿ.ಕೋಟೆ: ಇಲ್ಲಿನ ಬೋಚಿಕಟ್ಟೆ ಎಂಬಲ್ಲಿ ಟ್ಯಾಂಕರ್‌ ಢಿಕ್ಕಿಯಾಗಿ ಬೈಕ್‌ನಲ್ಲಿದ್ದ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ದುರ್ಘ‌ಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ. 

Advertisement

ನಂಜನನಾಯಕ ಹಳ್ಳಿಯ ನಿವಾಸಿಗಳಾದ ಶ್ರೀನಿವಾಸ(35)ಉಮಾ(30) ಮತ್ತು ಚೈತ್ರಾ (9) ಮೃತ ದುರ್ದೈವಿಗಳೆಂದು ತಿಳಿದು ಬಂದಿದೆ. 

ಸ್ಥಳದಲ್ಲಿ ಉದ್ವಿಗ್ನ ವಾತಾವರಣ
ಘಟನೆಯ ಬಳಿಕ ಟ್ಯಾಂಕರನ್ನು  ಚಾಲಕ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಸ್ಥಳಕ್ಕೆ ಟ್ಯಾಂಕರ್‌ ಮಾಲಿಕ ಬಂದಾಗ ಉದ್ರಿಕ್ತ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next