Advertisement

Chennai: ರೈಲು ಹರಿದು ಹುಬ್ಬಳ್ಳಿಯ ಮೂವರು ಮಕ್ಕಳು ಮೃತ್ಯು

08:21 PM Oct 24, 2023 | Vishnudas Patil |

ಚೆನ್ನೈ: ನಗರದ ಹೊರವಲಯದ ಉರಪಕ್ಕಂ ಬಳಿ ಮಂಗಳವಾರ ಇಬ್ಬರು ಸಹೋದರರು ಸೇರಿದಂತೆ ಮೂವರು ಮಕ್ಕಳು ಉಪನಗರ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಮೂವರು ಹುಬ್ಬಳ್ಳಿ ಮೂಲದವರಾಗಿದ್ದು ಹಳಿಯಲ್ಲಿ ಆಟವಾಡುವ ವೇಳೆ ರೈಲಿಗೆ ಸಿಲುಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರು ಮಂಜುನಾಥ್(11) ರವಿ(12) ಮತ್ತು ಸುರೇಶ್(14) ಎನ್ನುವವರಾಗಿದ್ದಾರೆ.

ರವಿ ಮತ್ತು ಸುರೇಶ್ ಅವರು ಜಂಬಯ್ಯ ಎನ್ನುವವರ ಪುತ್ರರಾಗಿದ್ದು ಇಬ್ಬರು ಸಹೋದರರು ಕಿವುಡ ಮತ್ತು ಮೂಗರಾಗಿದ್ದರು. ಮಂಜುನಾಥ ಎಂಬಾತ ಹನುಮಂತ ಅವರ ಪುತ್ರನಾಗಿದ್ದು ಮಾತುಬರುತ್ತಿರಲಿಲ್ಲ. ಮೂವರು ಮಕ್ಕಳು ದಸರಾ ರಜೆಯಿದ್ದ ಕಾರಣ ಚೆನ್ನೈಗೆ ತೆರಳಿದ್ದರು ಎಂದು  ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವರ ಪೋಷಕರು ಚೆನ್ನೈನಲ್ಲಿ ದಿನಗೂಲಿ ನೌಕರರಾಗಿದ್ದರು. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next