ತಿರುವಳ್ಳೂರು: ತನಗೆ ಕುಳಿತುಕೊಳ್ಳಲು ಕುರ್ಚಿ ತರಲು ವಿಳಂಬ ಮಾಡಿದ ಪಕ್ಷದ ಕಾರ್ಯಕರ್ತನ ಮೇಲೆ ತಮಿಳುನಾಡು ಸಚಿವ ಎಸ್ಎಂ ನಾಸರ್ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ. ಈ ವಿಡಿಯೋ ವೈರಲ್ ಆಗಿದ್ದು, ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದೆ.
Advertisement
ಬಯಲಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಕುರ್ಚಿಗಳನ್ನು ತೆಗೆದುಕೊಂಡು ಓಡೋಡಿ ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಚಿವರ ಈ ರೀತಿಯ ವರ್ತನೆಗೆ ವಿಪಕ್ಷಗಳು ವ್ಯಾಪಕ ಟೀಕೆ ಮಾಡಿವೆ.
ಕಳೆದ ವರ್ಷ, ಎಸ್ಎಂ ನಾಸರ್ ಅವರು ಕೇಂದ್ರ ಸರ್ಕಾರವು ಹಾಲಿಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಿಧಿಸಿದೆ ಎಂದು ಸುಳ್ಳು ಮಾಹಿತಿ ನೀಡಿ ಸುದ್ದಿಯಾಗಿ ಟೀಕೆಗೆ ಗುರಿಯಾಗಿದ್ದರು.