Advertisement

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

12:56 AM Apr 25, 2024 | Team Udayavani |

ಅರಂತೋಡು: ಅರಂತೋಡು ಬಳಿಯ ಪೆರಾಜೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತ ಮೂಲೆ ಮಜಲು ಗೌತಮ್‌ ಅವರ ಮೇಲೆ ಬಿಜೆಪಿಯ ಗ್ರಾ.ಪಂ. ಸದಸ್ಯ ಸುಭಾಷ್‌ ಚಂದ್ರ ಬಂಗಾರುಕೋಡಿ ಹಾಗೂ ಗುಡ್ಡೆಮನೆ ಮಹಾಬಲ ಅವರು ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದ್ದು, ಗಾಯಗೊಂಡ ಗೌತಮ್‌ ಕೊಡಗು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿದ್ದಾರೆ.

Advertisement

ಎ. 22 ರಂದು ಸಂಜೆ ಗೌತಮ್‌ ರವರು ಚುನಾವಣಾ ಪ್ರಚಾರ ಕಾರ್ಯ ನಡೆಸಿ ಮನೆಗೆ ಬೈಕ್‌ ನಲ್ಲಿ ಮರಳುತ್ತಿದ್ದಾಗ ಕೋಟೆ ಪೆರಾಜೆ ಬಸ್‌ ನಿಲ್ದಾಣ ಬಳಿ ಸುಭಾಷ್‌ ಚಂದ್ರ ಮತ್ತು ಮಹಾಬಲ ಅವರು ಅಡ್ಡ ಹಾಕಿ ಜೀವಸಹಿತ ಉಳಿಸುವುದಿಲ್ಲ ಎಂದು ಹೇಳಿ ದೊಣ್ಣೆ ಮತ್ತು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆಂದು ಹೇಳಲಾಗಿದೆ. ಗೌತಮ್‌ ನೀಡಿದ ದೂರಿನಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್‌ ಠಾಣೆಯಲ್ಲಿ ಸುಭಾಷ್‌ ಚಂದ್ರ ಬಂಗಾರುಕೋಡಿ ಹಾಗೂ ಮಹಾಬಲ ಗುಡ್ಡೆ ಮನೆ ಇವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next