Advertisement

Tamil Nadu; ಭಾಷಣ ಓದಲು ರಾಜ್ಯಪಾಲ ಆರ್‌.ಎನ್‌.ರವಿ ನಕಾರ

12:08 AM Feb 13, 2024 | Team Udayavani |

ಚೆನ್ನೈ: ತಮಿಳುನಾಡು ರಾಜ್ಯಪಾಲ ಆರ್‌.ಎನ್‌. ರವಿ ಅವರು ಮಂಗಳವಾರ ವಿಧಾನಸಭೆ ಯಲ್ಲಿ ಡಿಎಂಕೆ ಸರಕಾರ ಸಿದ್ಧಪಡಿಸಿದ ಭಾಷಣ ಓದಲು ನಿರಾಕರಿಸಿದ್ದಾರೆ. ಅಧಿವೇಶನದ ಆರಂಭದಲ್ಲಿ ಮತ್ತು ಮುಕ್ತಾಯದಲ್ಲಿ ರಾಷ್ಟ್ರಗೀತೆ ನುಡಿಸಲು ಆದೇಶ ನೀಡಿದ್ದರೂ ಅದನ್ನು ಪಾಲಿಸಲಾಗಿಲ್ಲ ಎಂದು ರಾಜ್ಯಪಾಲರು ದೂರಿದ್ದಾರೆ.

Advertisement

ಇದರಿಂದ ಡಿಎಂಕೆ ಸರಕಾರ ಮತ್ತು ರಾಜ್ಯಪಾಲರ ನಡುವಿನ ಗುದ್ದಾಟ ಹೊಸ ಹಂತ ಪ್ರವೇಶಿಸಿದೆ. ಕೇವಲ 2 ನಿಮಿಷಗಳಲ್ಲಿ ವಿಧಾನಸಭೆ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಮಾತನಾಡಿ, ಅನಂತರ ಅರ್ಧಕ್ಕೇ ಭಾಷಣ ನಿಲ್ಲಿಸಿ ಹೊರನಡೆದಿದ್ದಾರೆ. ರಾಜ್ಯಪಾಲರ ಮಾತಿನ ಕೆಲವು ಅಂಶಗಳನ್ನು ಕಡತದಿಂದ ತೆಗೆದು ಹಾಕಲು ಸ್ಪೀಕರ್‌ ಎಂ.ಅಪ್ಪಾವು ಆದೇಶ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next