Advertisement

Internal differences ; ಬಿಜೆಪಿ ಸೇರಿದ ತಮಿಳುನಾಡಿನ ಕಾಂಗ್ರೆಸ್ ಶಾಸಕಿ

06:56 PM Feb 24, 2024 | Team Udayavani |

ಹೊಸದಿಲ್ಲಿ: ತಮಿಳುನಾಡಿನ ಕಾಂಗ್ರೆಸ್ ಶಾಸಕಿ ಎಸ್. ವಿಜಯಧರಣಿ ಅವರು ಶನಿವಾರ ಹೊಸದಿಲ್ಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಜೆಪಿ ಸೇರ್ಪಡೆಯಾದರು.

Advertisement

ತಮಿಳುನಾಡು ಕಾಂಗ್ರೆಸ್‌ನ ನಾಯಕಿಯಾಗಿದ್ದ ವಿಜಯಧರಣಿ ಅವರು 2021 ರಲ್ಲಿ ಕನ್ಯಾಕುಮಾರಿ ಜಿಲ್ಲೆಯ ವಿಲ್ವಂಕೋಡ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಆ ಭಾಗದಲ್ಲಿ ಸದ್ಯ ಬಿಜೆಪಿ ಗಮನಾರ್ಹ ಅಸ್ತಿತ್ವವನ್ನು ಹೊಂದಿದೆ.

ಕಳೆದ ಕೆಲವು ದಿನಗಳಿಂದ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯದಿಂದಾಗಿ ಅವರುಪಕ್ಷ ಬದಲಾಯಿಸುವ ಬಗ್ಗೆ ಊಹಾಪೋಹ ಎದ್ದಿತ್ತು. ಇತ್ತೀಚಿನವರೆಗೂ ಸಿಎಲ್‌ಪಿ ನಾಯಕರಾಗಿದ್ದ ಹಿರಿಯ ನಾಯಕ ಸೆಲ್ವಪೆರುಂತಗೈ ಅವರೊಂದಿಗೆ ತೀವ್ರ ಅಸಮಾಧಾನ ಹೊಂದಿದ್ದರು ಎನ್ನಲಾಗಿದೆ.

ಬಿಜೆಪಿ ಸೇರಿದ ಬಳಿಕ ವಿಜಯಧರಣಿ, ”ನಾನು ಇದೇ ಮೊದಲ ಬಾರಿಗೆ ಪಕ್ಷ ಬದಲಾಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ದೇಶಕ್ಕೆ ಮುಖ್ಯವಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next