Advertisement

Tamil Nadu; ಪುತ್ರ ಉದಯನಿಧಿಗೆ ಬಡ್ತಿ ನೀಡಿದ ಸ್ಟಾಲಿನ್: ನಾಳೆ ಪ್ರಮಾಣವಚನ

10:18 PM Sep 28, 2024 | Team Udayavani |

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶನಿವಾರ(ಸೆ28 ) ಮೆಗಾ ಕ್ಯಾಬಿನೆಟ್ ಪುನರ್ ರಚನೆ ಮಾಡಲು ತೀರ್ಮಾನ ಮಾಡಿದ್ದು, ಉಪಮುಖ್ಯಮಂತ್ರಿಯಾಗಿ ಪುತ್ರ ಉದಯನಿಧಿ ಸ್ಟಾಲಿನ್ ಅವರನ್ನು ಹೆಸರಿಸಲಾಗಿದೆ ಎಂದು ರಾಜಭವನವನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ. ಉದಯನಿಧಿ ಪ್ರಸ್ತುತ ಕ್ರೀಡಾ ಸಚಿವರಾಗಿದ್ದಾರೆ.

Advertisement

ಕೆಲ ದಿನಗಳಿಂದ ಉದಯನಿಧಿ ಅವರಿಗೆ ಡಿಸಿಎಂ ಹುದ್ದೆ ನೀಡಲಾಗುತ್ತದೆ ಎಂಬ ವಿಚಾರ ಚರ್ಚೆಯಾಗುತ್ತಿತ್ತು. ಈ ಬಗ್ಗೆ ವಿಪಕ್ಷಗಳಾದ ಎಐಎಡಿಎಂಕೆ, ಬಿಜೆಪಿ ತೀವ್ರ ಟೀಕೆಯನ್ನೂ ವ್ಯಕ್ತ ಪಡಿಸಿದ್ದವು.

ಡಿಎಂಕೆ ಪಕ್ಷದ ಹಿರಿಯ ನಾಯಕರನ್ನು ಮೀರಿ, ಟೀಕೆಗಳ ನಡುವೆಯೂ ಪುತ್ರನಿಗೆ ಬಡ್ತಿ ನೀಡುವಲ್ಲಿ 71 ರ ಹರೆಯದ ಸ್ಟಾಲಿನ್ ಯಶಸ್ವಿಯಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಡಿಎಂಕೆ ನೇತೃತ್ವವನ್ನು 46 ರ ಹರೆಯದ ಉದಯನಿಧಿ ವಹಿಸುವುದು ಖಚಿತವಾಗಿದೆ.

ರಾಜಭವನದ ಪ್ರಕಟಣೆಯ ಪ್ರಕಾರ, ಭಾನುವಾರ (ಸೆಪ್ಟೆಂಬರ್ 29)ಮಧ್ಯಾಹ್ನ 3:30 ಕ್ಕೆ ಚೆನ್ನೈನ ರಾಜಭವನದಲ್ಲಿ ನೂತನ ಸಂಪುಟ ಸಚಿವರ ಪ್ರಮಾಣ ವಚನ ಸ್ವೀಕಾರ ನಡೆಯಲಿದೆ. ಸಂಪುಟ ಪುನರ್ ರಚನೆಯಲ್ಲಿಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಪಡೆದ ಸೆಂಥಿಲ್ ಬಾಲಾಜಿಯವರನ್ನು ಸಂಪುಟಕ್ಕೆ ಪುನಃ ಸೇರಿಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next