Advertisement

ಖ್ಯಾತ ತಮಿಳು ನಟನಿಗೆ ಕ್ಯಾನ್ಸರ್ ಕಂಟಕ: ವಿಡಿಯೋ ಮೂಲಕ ಸಹಾಯಕ್ಕಾಗಿ ಮನವಿ ಮಾಡಿದ ತವಸಿ

05:58 PM Nov 18, 2020 | sudhir |

ಮಧುರೈ :ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿರುವ ಖ್ಯಾತ ತಮಿಳು ನಟ ತವಸಿ ಮಧುರೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ತನ್ನ ಚಿಕಿತ್ಸೆಯ ವೆಚ್ಚಕ್ಕಾಗಿ ವೀಡಿಯೋ ಮೂಲಕ ಸಹಾಯಕ್ಕಾಗಿ ವಿನಂತಿಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ಬಾರಿ ವೈರಲ್ ಆಗಿದೆ.

Advertisement

ಕಳೆದ 30 ವರ್ಷಗಳಿಂದ ಕಾಲಿವುಡ್ ಇಂಡಸ್ಟ್ರಿಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ಗುರುತಿಸಿಕೊಂಡು ತಮಿಳು ಚಿತ್ರರಂಗಕ್ಕೆ ಅಘಾಧ ಸೇವೆ ಸಲ್ಲಿಸಿರುವ ತವಸಿ ಅವರ ದೈಹಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇವರ ಈ ಪರಿಸ್ಥಿತಿಯನ್ನು ಕಂಡು ಹಲವಾರು ತಾರೆಯರು ಹಾಗೂ ದಾನಿಗಳು ಸಹಾಯ ಹಸ್ತದ ಭರವಸೆ ನೀಡಿದ್ದಾರೆ.

ಡಿಎಮ್ ಕೆ ಪಕ್ಷದ ತಿರುಪ್ಪರನ್ ಕುಡ್ರಂ ಶಾಸಕ ಡಾ. ಸರವನ್ನನ್ ಆಸ್ಪತ್ರೆಗೆ ಭೇಟಿ ನೀಡಿ ತವಸಿ ಆರೋಗ್ಯ ವಿಚಾರಿಸಿದ್ದಾರೆ. ಜೊತೆಗೆ ಇವರ ಚಿಕಿತ್ಸೆಯ ಖರ್ಚು ನಿಭಾಯಿಸಲು ಇವರ ಕುಟುಂಬಕ್ಕೆ ಸಹಾಯ ಧನವನ್ನು ನೀಡುವಂತೆ ತಮ್ಮ ಪೇಸ್ ಬುಕ್ ಪೋಸ್ಟ್ ನ ಮೂಲಕ ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ಚಿಕಿತ್ಸೆಗಾಗಿ ವರವರ ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸಲು ಬಾಂಬೆ ಹೈಕೋರ್ಟ್ ಒಪ್ಪಿಗೆ

ಸಹಾಯಕ್ಕೆ ಮುಂದಾದ ತಾರೆಯರು
ತವಸಿ ಆರೋಗ್ಯ ಪರಿಸ್ಥಿಯನ್ನು ಕಂಡು ಚಿತ್ರರಂಗದ ಹಲವು ತಾರೆಯರು ಆರ್ಥಿಕ ಸಹಾಯಕ್ಕೆ ಮುಂದಾಗಿದ್ದಾರೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿ ಕಾಂತ್ ತವಸಿ ಸಹಾಯಕ್ಕೆ ನಿಂತಿದ್ದು ತಮ್ಮ ತಂಡಕ್ಕೂ ಮಾರ್ಗದರ್ಶನ ನೀಡಿದ್ದಾರೆ.

Advertisement

ಹಾಗೆಯೇ ತಮಿಳಿನ ಯುವ ನಟ ಸಿಂಬು ಒಂದು ಲಕ್ಷ, ರೂ. ನೀಡಿದ್ದಾರೆ ಎಂದು ವರದಿಯಾಗಿದ್ದು, ವಿಜಯ ಸೇತುಪತಿ ಹತ್ತು ಲಕ್ಷ ನೀಡುವುದಾಗಿ ಭರವಸೆ ನೀಡಿದ್ದಾರೆ. ಸೂರ್ಯ ಅವರ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ತವಸಿ ಚಿಕಿತ್ಸೆಗೆ ನೆರವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next