Advertisement

ತಾಲೂಕು ಮಟ್ಟದ ಚೆಸ್‌ ಪಂದ್ಯಾಟ: ನಿಹಾಲ್‌ಗೆ ಪ್ರಶಸ್ತಿ

03:45 AM Jul 06, 2017 | Team Udayavani |

ಕುಂದಾಪುರ : ಇಲ್ಲಿನ ಕಶ್ವಿ‌ ಚೆಸ್‌ ಸ್ಕೂಲ್‌ನಲ್ಲಿ  ಜು.2ರಂದು ನಡೆದ ತಾಲೂಕು ಮಟ್ಟದ ಚೆಸ್‌ ಪಂದ್ಯಾಟದಲ್ಲಿ ಸ.ಹಿ.ಪ್ರಾ ಶಾಲೆ ಕಾಳಾವರದ ನಿಹಾಲ್‌ ಪ್ರಥಮ ಸ್ಥಾನ ಗಳಿಸಿರುತ್ತಾರೆ. 

Advertisement

ಕಾರ್ಕಡ ಸ.ಹಿ.ಪ್ರಾ. ಶಾಲೆಯ ಕಾರ್ತಿಕ್‌ ದ್ವಿತೀಯ, ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ಅನಿರುದ್ಧ ತೃತೀಯ ಪ್ರಶಸ್ತಿ ಪಡೆದರೆ,   4ನೇ ಸ್ಥಾನವನ್ನು   ಕುಂದಾಪುರ ಬೋರ್ಡ್‌ ಹೈಸ್ಕೂಲ್‌ನ ಶ್ರೇಯಸ್‌, 5ನೇ ಸ್ಥಾನವನ್ನು  ಕೋಟ ಪಡುಕೆರೆಯ ನಾಗಭೂಷಣ, 6ನೇ ಸ್ಥಾನವನ್ನು  ಶ್ರುತಿ, 7ನೇ ಸ್ಥಾನವನ್ನು  ಸುಶಾನ್‌, 8ನೇ ಸ್ಥಾನವನ್ನು  ಛಾಯ, 9ನೇ ಸ್ಥಾನವನ್ನು  ಮಾನಸ ಹಾಗೂ 10ನೇ ಸ್ಥಾನವನ್ನು ಶ್ರೀವಾಣಿ ಪಡೆದುಕೊಂಡರು.

ವಿಶೇಷ ಬಹುಮಾನವಾಗಿ ಬಸೂÅರು ಶಾರದ ಆಂಗ್ಲ ಮಾದ್ಯಮ ಶಾಲೆಯ ಸಾನಿಕ, ಹಂಗಳೂರಿನ ಸೈಂಟ್‌ ಪಿಯೂಸ್‌ನ ಆಯ್ಯುಷ್‌ ಪೂಜಾರಿ ಮತ್ತು ನಿಶಾಂತ, ವಕ್ವಾಡಿ ಗುರುಕುಲ ಪಬ್ಲಿಕ್‌ ಸ್ಕೂಲ್‌ನ ಚೈತಾಲಿ ಪಡೆದುಕೊಂಡರು. ಈ ಎಲ್ಲಾ ವಿದ್ಯಾರ್ಥಿಗಳು ಕಶ್ವಿ‌ ಚೆಸ್‌ ಸ್ಕೂಲ್‌ ಕುಂದಾಪುರದಲ್ಲಿ ತರಬೇತಿ ಪಡೆದಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಆಚಾರ್ಯ ಕೋಟೇಶ್ವರ ವಹಿಸಿದ್ದರು.

ಮುಖ್ಯ ಅತಿಥಿಯಾಗಿ ಬಸೂÅರು ಶ್ರೀ ಶಾರದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಸೂರಜ ಶೆಟ್ಟಿ, ಕಶ್ವಿ‌ ಚೆಸ್‌ ಸ್ಕೂಲಿನ ತರಬೇತುದಾರ ಗುರುರಾಜ್‌ ಶೆಟ್ಟಿ ಉಪಸ್ಥಿತರಿದ್ದರು. 

ಸಚಿನ್‌ ಶೆಟ್ಟಿ, ಪ್ರದೀಪ ರಾವ್‌ ಮತ್ತು ದೀಪಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next