Advertisement

ಜೆಸ್ಕಾಂ ಅಧಿಕಾರಿಗಳ ಜೊತೆ ವಾಗ್ವಾದ

05:17 AM May 13, 2020 | Suhan S |

ಕುಷ್ಟಗಿ: ಮಾರ್ಚ್‌, ಮೇ ತಿಂಗಳ ಲಾಕ್‌ಡೌನ್‌ ವೇಳೆಯಲ್ಲಿ ಸರಾಸರಿ ಬಿಲ್‌ ಪಾವತಿಸಿದರೂ ದುಪ್ಪಟ್ಟು ಮೊತ್ತದಲ್ಲಿ ಬಿಲ್‌ ಬಂದಿರುವುದಕ್ಕೆ ಗ್ರಾಹಕರು ಜೆಸ್ಕಾಂ ಅಧಿಕಾರಿಗಳ ವಿರುದ್ಧ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ಕೋವಿಡ್ 19 ವೈರಸ್‌ ಸಂಕಷ್ಟದಲ್ಲೂ ಗ್ರಾಹಕರು ಸರಾಸರಿ ಮೊತ್ತ ಪಾವತಿಸಿದ್ದಾರೆ ಆದರೂ ಪ್ರತಿ ತಿಂಗಳ ಬರುವ ಮೊತ್ತದ ಬದಲಿಗೆ ಹೆಚ್ಚುವರಿ ಬಿಲ್‌ ಬಂದಿದೆ. 200 ರೂ. ದಿಂದ 1 ಸಾವಿರ ರೂ.ವರೆಗೆ ಬಿಲ್‌ ಬಂದಿದ್ದು, ಇಲಾಖೆಯವರು ಸ್ಲ್ಯಾಬ್‌ ಎಂದು ಸಮರ್ಥಿಸಿಕೊಳ್ಳುತ್ತಿದ್ದು, ವಿದ್ಯುತ್‌ ಸಂಪರ್ಕದ ಕಡಿತದ ಹೆದರಿಗೆ ಎಷ್ಟೇ ಮೊತ್ತ ಬಂದರೂ, ಪ್ರಶ್ನಿಸಿದರೂ, ಪ್ರಯೋಜನೆ ಇಲ್ಲವೆಂದು ಪಾವತಿಸುವುದು ಅನಿವಾರ್ಯವಾಗುತ್ತಿದ್ದು, ಕೋವಿಡ್ ಸಂಕಷ್ಟದಲ್ಲೂ ವಿದ್ಯುತ್‌ ಇಲಾಖೆಯ ಹಗಲು ದರೋಡೆಯಾಗಿದೆ ಎಂದು ರಮೇಶ ಕಟ್ಟಿಮನಿ, ದೇವರಾಜ ಹಜಾಳ್‌, ಶಿವು ಹಜಾಳ ಆರೋಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next