Advertisement

Talk Fight: ನನ್ನ ಬಡತನ ಹೀಯಾಳಿಸಿದ್ದೀರಿ: ಎಂ.ಬಿ.ಪಾಟೀಲ್‌ಗೆ ಛಲವಾದಿ ತಿರುಗೇಟು

12:52 AM Aug 31, 2024 | Team Udayavani |

ಬೆಂಗಳೂರು: ಬೃಹತ್‌ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್‌ ಅವರೇ, ನೀವು ನನ್ನ ಬಡತನವನ್ನು ಹೀಯಾಳಿಸಿಬಿಟ್ಟಿರಿ. ನನ್ನನ್ನು ಲಜ್ಜೆಗೆಟ್ಟ ವ್ಯಕ್ತಿ ಎಂದಿರಲ್ಲ? ದಯವಿಟ್ಟು ನಾನು ಯಾವುದರಲ್ಲಿ ಲಜ್ಜೆಗೆಟ್ಟವ ಎಂದು ಹೇಳಿ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಪಕ್ಷ ನಾಯಕನಾಗಿ ನಾನು ನನ್ನ ಸ್ಥಾನದ ಗೌರವ ಉಳಿಸುವ ಕೆಲಸ ಮಾಡುತ್ತಿದ್ದೇನೆ. ನೀವು ನಿಮ್ಮ ಸಚಿವ ಸ್ಥಾನದ ಘನತೆಗೆ ತಕ್ಕಂತೆ ಮಾತನಾಡಿ. ನಾನು ಪರಿಶಿಷ್ಟ ಜಾತಿಯವ. ನನಗ್ಯಾರೂ ಹೇಳುವವರು ಕೇಳುವವರು ಇಲ್ಲ ಎಂದು ಲಜ್ಜೆಗೆಟ್ಟವ ಎಂದಿದ್ದೀರಲ್ಲವೇ? ಹಾಗಾದರೆ ನೀವು ಸತ್ಯ ಹರಿಶ್ಚಂದ್ರರಾ? ಈ ಪ್ರಪಂಚದಲ್ಲಿ ಯಾರೂ ಹರಿಶ್ಚಂದ್ರರಿಲ್ಲ ಎಂಬುದನ್ನು ನೆನಪಿಡಿ ಎಂದು ತಿರುಗೇಟು ನೀಡಿದರು.

302, ಡೆಫೊಡಿಲ್‌ ಅಪಾರ್ಟ್ಮೆಂಟ್‌ ಯಾರದ್ದು ? ನಿಮ್ಮದೇ ಅಲ್ಲವೇ? ನಿಮ್ಮದಕ್ಕೇ ನೀವು 2 ಸೈಟ್‌ ಬರೆದುಕೊಂಡಿದ್ದೀರಿ. ಇನ್ನು 3 ಸೈಟ್‌ ವಿಜಯಪುರದಲ್ಲಿ ಬರೆದುಕೊಂಡಿದ್ದೀರಿ. ಸೋಲಾಪುರ ರಸ್ತೆ, ಕೆಎಚ್‌ಬಿ ಕಾಲೋನಿಯಲ್ಲಿ ಅವು ಇವೆ. ಲೂಟಿ ಮಾಡುತ್ತಿರುವುದು ನಾನಾ ನೀವಾ? ನಾನು ಮಾಡಿದ ಲೋಪ ಏನು? ಅಪರಾಧವಾದರೂ ಏನು? ಸೇಲ್‌ ಡೀಡ್‌ಗೆ ಪತ್ರ ಬರೆದಿದ್ದಾರೆ ಎಂದಿದ್ದೀರಿ. ಸೇಲ್‌ ಡೀಡ್‌ಗಲ್ಲದೇ ಇನ್ನು ಯಾವುದಕ್ಕೆ ಪತ್ರ ಕೊಡಬೇಕು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next