Advertisement

ತಲಕಾವೇರಿ: 2 ಶವಗಳ ಪತ್ತೆಯಿಲ್ಲ; ಶೋಧ ಕಾರ್ಯಾಚರಣೆ ಅಂತ್ಯ

12:40 AM Aug 26, 2020 | mahesh |

ಮಡಿಕೇರಿ: ಗಜಗಿರಿ ಬೆಟ್ಟ ಕುಸಿದು ಐವರು ಮೃತಪಟ್ಟ ತಲಕಾವೇರಿ ಪ್ರದೇಶದಲ್ಲಿ ಕಳೆದ 17 ದಿನಗಳಿಂದ ಕಾರ್ಯಾಚರಣೆ ನಡೆಸಿದರೂ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಅವರ ಪತ್ನಿ ಶಾಂತಾ ಆಚಾರ್‌ ಹಾಗೂ ಸಹಾಯಕ ಅರ್ಚಕ ಶ್ರೀನಿವಾಸ ಅವರ ಮೃತದೇಹ ಪತ್ತೆಯಾಗದಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಶೋಧ ಕಾರ್ಯದ ಕಾರ್ಯವನ್ನು ಸ್ಥಗಿತಗೊಳಿಸಿದೆ. ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ ಪರಿಹಾರ ನೀಡಲು ನಿರ್ಧರಿಸಿದೆ.

Advertisement

ಆ. 6ರಂದು ಬಿರುಗಾಳಿ, ಮಳೆಗೆ ಗಜಗಿರಿ ಬೆಟ್ಟ ಕುಸಿದು ಮನೆ ನೆಲಸಮಗೊಂಡು ಐವರು ನಾಪತ್ತೆಯಾಗಿದ್ದರು. 2018ರಲ್ಲಿ ಜೋಡುಪಾಲದಲ್ಲಿ ಮಂಜುಳ ಅವರ ಮೃತದೇಹ ಸಿಗದೆ ಇದ್ದಾಗ ಮತ್ತು ವೀರಾಜಪೇಟೆಯ ತೋರ ಗ್ರಾಮದಲ್ಲಿ ನಾಲ್ವರ ಶವ ಶೋಧ ಅಸಾಧ್ಯವಾದಾಗ ಇದೇ ಕ್ರಮವನ್ನು ಅನುಸರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next