Advertisement

Madikeri: ತಲಕಾವೇರಿಯಲ್ಲಿ ಸ್ವಾಮೀಜಿಗಳಿಂದ ವಿಶೇಷ ಪೂಜೆ

04:18 PM Oct 26, 2024 | Team Udayavani |

ಮಡಿಕೇರಿ: ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಣ ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಆರಂಭಗೊಂಡು ಶತಮಾನ ಪೂರೈಸಿದೆ. ಈ ಸಂಕಷ್ಟದಿಂದ ಜನರು ನೆಮ್ಮದಿಯನ್ನು ಕಳೆೆದುಕೊಂಡಿದ್ದು, ಸುದೀರ್ಘ‌ ಅವಧಿಯಿಂದ ನಡೆದ‌ುಕೊಂಡು ಬಂದಿರುವ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಾಗಿದೆ ಎಂದು ಮೈಸೂರು ಆದಿ ಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥ ಸ್ವಾಮೀಜಿ ತಿಳಿಸಿದ್ದಾರೆ.

Advertisement

ತಲಕಾವೇರಿಯಲ್ಲಿ ಕಾವೇರಿ ನದಿ ರಕ್ಷಣ ಸಮಿತಿಯಿಂದ ಆಯೋಜಿತ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಮಾತೆ ಕಾವೇರಿಗೆ ಪೂಜೆ ನೆರವೇರಿಸಿ, ನದಿ ವಿವಾದ ಪರಿಹಾರಕ್ಕೆ ನೋಂದಾವಣೆ ಮಾಡಿರುವ ಸಮಿತಿಗೆ ಶುಭ ಹಾರೈಸಿ ಅವರು ಮಾತನಾಡಿದರು.

ಆದಿ ಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ರಾಜ್ಯದ ವಿವಿಧ ಮಠಾಧೀಶರು, ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರು, ನೀರಾವರಿ ತಜ್ಞರು, ಕಾನೂನು ತಜ್ಞರನ್ನು ಒಳಗೊಂಡ ನೂರು ಮಂದಿಯ ವಿಶೇಷ ಸಮಿತಿಯನ್ನು ರಚಿಸಿ ನೋಂದಾವಣೆ ಮಾಡಲಾಗಿದೆ. ಈ ಸಮಿತಿ, ಕಾವೇರಿ ನದಿ ನೀರಿನ ಹಂಚಿಕೆ ವಿವಾದ ಪರಿಹಾರಕ್ಕೆ ಮುಂದಾಗಿರುವುದಾಗಿ ಮಾಹಿತಿ ನೀಡಿದರು. ಕಾವೇರಿ ನದಿ ವಿವಾದ ಪರಿಹಾರಕ್ಕೆ ರಚಿಸಲಾಗಿರುವ ಕಾವೇರಿ ನದಿ ರಕ್ಷಣ ಸಮಿತಿಯನ್ನು ಬೆಂಗಳೂರಿನಲ್ಲಿ ನೋಂದಾವಣೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next